ನೀವು ಶಿವನ ಭಕ್ತರಾ!? ಹಾಗಿದ್ರೆ ಶಂಕರನ ಪೂಜಿಸಲು ಉತ್ತಮ ಸಮಯ ಯಾವುದು? ಇದನ್ನು ಮೊದಲು ತಿಳಿಯಿರಿ!

ಡಿಸೆಂಬರ್ 5, 2024 - 06:39
 0  10
ನೀವು ಶಿವನ ಭಕ್ತರಾ!? ಹಾಗಿದ್ರೆ ಶಂಕರನ ಪೂಜಿಸಲು ಉತ್ತಮ ಸಮಯ ಯಾವುದು? ಇದನ್ನು ಮೊದಲು ತಿಳಿಯಿರಿ!

ಯಾವುದೇ ಮಾಸದಲ್ಲೂ ಶಿವನ ಆರಾಧನೆ ಶ್ರೇಷ್ಠ. ಮಾನಸಿಕ ಸ್ಥಿರತೆ, ಶತ್ರುನಾಶ, ಆರೋಗ್ಯ ಲಾಭ, ಕಾರ್ಯವಿಜಯ, ಗೃಹಶಾಂತಿ ಮುಖ್ಯವಾಗಿ ಮೃತ್ಯುಭಯದಿಂದ ರಕ್ಷಣೆ ಪಡೆಯಲು ಮೃತ್ಯುಂಜಯನಾದ ಶಿವನನ್ನು ಆರಾಧಿಸಲಾಗುತ್ತದೆ. 

ಶಿವನ ಆರಾಧನೆ ಮಾಡೋದರಿಂದ ಗಂಗಾಧರ್, ಗೌರಿವರ ಶಿವ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ. ಶಿವನ ಆರಾಧನೆಯನ್ನು ಹೇಗೆ ಮಾಡಬೇಕು? ಸಮಯ ಯಾವುದು? ಎಂಬೆಲ್ಲಾ ವಿಚಾರ ತಿಳಿಯೋಣ ಬನ್ನಿ. 

ಪ್ರತಿದಿನ ಶಿವನ ಆರಾಧನೆ ಮಾಡುವುದು ಉತ್ತಮ. ಪ್ರದೋಷ ಕಾಲ ಅಂದರೆ ಸಂಜೆಯ ಸಮಯ ಮತ್ತು ಬೆಳಗಿನ ಶಿವಾರಾಧನೆ ಬಹಳ ಮಹತ್ವದ್ದಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ಪ್ರತಿ ಸೋಮವಾರವಾದರೂ ಶಿವನ ಪೂಜೆ ಮಾಡುವುದು ಉತ್ತಮ. ಅದು ಸಾಧ್ಯವಾಗದಿದ್ದರೆ ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ದಿನ ಮತ್ತು ಮಾಸ ಶಿವರಾತ್ರಿಯ ದಿನ ಶಿವನ ಆರಾಧನೆ ಮಾಡುವುದು ಉತ್ತಮ. ಇದನ್ನು ಮಾಡಲು ಸಾಧ್ಯವಾಗದವರು ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ಶಿವನ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ಚಿಲಕಮರ್ತಿಯವರು ಹೇಳುತ್ತಾರೆ. 

ನಿತ್ಯವೂ ಶಿವನ ಆರಾಧನೆ ಮಾಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುವವರಿಗೆ ಮಹಾಶಿವರಾತ್ರಿಯ ದಿನ ಅಥವಾ ಮಾರ್ಗಶಿರ ಮಾಸದ ಆರ್ದ್ರಾ ನಕ್ಷತ್ರದಂದು ಶಿವನ ಪೂಜೆ ಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ. ಈ ವಿಶೇಷ ದಿನಗಳಲ್ಲಿ ಶಿವನಿಗೆ ಅಭಿಷೇಕ, ದರ್ಶನ, ಪೂಜೆ ಮಾಡುವುದರಿಂದ ವರ್ಷವಿಡೀ ಶಿವನನ್ನು ಪೂಜಿಸಿದ ಫಲ ದೊರೆಯುತ್ತದೆ. ಆರ್ದ್ರಾ, ಶಿವನ ಅಚ್ಚುಮೆಚ್ಚಿನ ನಕ್ಷತ್ರವಾಗಿದೆ. 

ಮಾರ್ಗಶಿರಾ ಮಾಸದ ಆರ್ದ್ರಾ ನಕ್ಷತ್ರದಲ್ಲಿ ನಡೆಯುವ ಶಿವನ ಪೂಜೆಯನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಶಿವನನ್ನು ಪೂಜಿಸುವಾಗ ಭಕ್ತಿಯಿಂದ ಅಭಿಷೇಕ ಮಾಡುವುದು ಉತ್ತಮ. ಶಿವಾಭಿಷೇಕ ಅಥವಾ ರುದ್ರಾಭಿಷೇಕವನ್ನು ಶಿವ ದೇವಾಲಯಗಳು, ದೇವಾಲಯಗಳು, ಗೋಶಾಲೆಗಳು ಅಥವಾ ಮನೆಗಳಲ್ಲಿ ನಡೆಸುವುದರಿಂದ ಪರಶಿವನ ಕೃಪೆಗೆ ಪಾತ್ರರಾಗಬಹುದಾಗಿದೆ.

ಪರಮೇಶ್ವರನಿಗೆ ಪಂಚಾಮೃತದಲ್ಲಿ ಅಭಿಷೇಕ ಮಾಡಿ, ರುದ್ರನಾಮಕ ಚಮಕ ಸ್ತುತಿಸಿ ಮತ್ತು ಬಿಲ್ವಪತ್ರೆ ಸಮರ್ಪಿಸಿ ಪೂಜಿಸುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ಖ್ಯಾತ ಜ್ಯೋತಿಷಿಗಳು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow