ಶಿವ ಪ್ರಿಯ ಸೋಮವಾರ ರಾತ್ರಿ ಈ ಕೆಲಸಗಳನ್ನು ಮಾಡಿದರೆ ಹಣದ ಸಮಸ್ಯೆ ಬಾರದು.!

ಹಿಂದೂ ಧರ್ಮ ದಲ್ಲಿ ಪೂಜಿಸಲ್ಪಡುವ ಕೋಟ್ಯಾಂತರ ದೇವಾನುದೇವತೆಗಳಲ್ಲಿ ಶಿವ ಪ್ರಮುಖ ಸ್ಥಾನ ಪಡೆದಿದ್ದಾನೆ. ಮಹಾದೇವನನ್ನು ನಾನಾ ಹೆಸರುಗಳಿಂದ ಭಕ್ತರು ಪೂಜೆ ಮಾಡ್ತಾರೆ. ಜಟಿಲ ಸಮಸ್ಯೆಗಳಿಗೂ ಪರಿಹಾರ ನೀಡಿ, ಕಷ್ಟಗಳನ್ನು ಪರಿಹರಿಸಬಲ್ಲ ದೇವರೆಂದ್ರೆ ಶಿವ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ವಾರದ ಏಳೂ ದಿನವನ್ನು ಒಂದೊಂದು ದೇವರಿಗೆ ಮೀಸಲಿಡಲಾಗಿದೆ. ಸೋಮವಾರವನ್ನು ಈಶ್ವರನಿಗೆ ಅರ್ಪಿಸಲಾಗಿದೆ.
ಸೋಮವಾರವನ್ನು ಪ್ರೀತಿಸುವ ಶಿವನಿಗೆ ಆ ದಿನ ವಿಶೇಷ ಪೂಜೆ, ಅಭಿಷೇಕ ನಡೆಯುತ್ತದೆ. ಈ ದಿನವನ್ನು ಚಂದ್ರದೇವನಿಗೂ ಅರ್ಪಿಸಲಾಗಿದೆ. ಸೋಮವಾರ ಈ ಕೆಲಸಗಳನ್ನು ಮಾಡುವುದರಿಂದ ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಹಣದ ಸಮಸ್ಯೆಯೂ ದೂರಾಗುವುದು. ಆದರೆ, ಇವುಗಳನ್ನು ನೀವು ಸೋಮವಾರದಂದು ರಾತ್ರಿ ಮಾಡಬೇಕು.
ಮಲಗುವ ಮುನ್ನ ಹೀಗೆ ಮಾಡಿ
ಧಾರ್ಮಿಕ ಪುರಾಣಗಳ ಪ್ರಕಾರ, ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಕೂರಿಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿ ಚಂದ್ರನನ್ನು ಪೂಜಿಸುವುದರಿಂದ ಶಿವನು ಸಂತೋಷಪಡುತ್ತಾನೆ. ಸೋಮವಾರದ ದಿನದಂದು ರಾತ್ರಿ ಚಂದ್ರನು ಆಕಾಶದಲ್ಲಿ ಉದಯಿಸಿದ ನಂತರ ನೀವು ಮಲಗುವ ಮಂಚ ಅಥವಾ ಹಾಸಿಗೆಯ ನಾಲ್ಕು ಮೂಲೆಗಳಲ್ಲಿ ಬೆಳ್ಳಿಯ ಮೊಳೆಗಳನ್ನು ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ದುರಾದೃಷ್ಟವು ದೂರಾಗಿ ಅದೃಷ್ಟವು ಸಿಗುತ್ತದೆ ಹಾಗೂ ವ್ಯಕ್ತಿಯ ಆರ್ಥಿಕ ಸ್ಥಿತಿಯೂ ದೃಢವಾಗುತ್ತದೆ.
ಇದನ್ನು ಪಠಿಸಿ
ಇದರ ಹೊರತಾಗಿ, ಒಬ್ಬ ವ್ಯಕ್ತಿಯು ಆರ್ಥಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ಅವನು ಸೋಮವಾರದ ದಿನದಂದು ವಿಧಿ - ವಿಧಾನಗಳ ಪ್ರಕಾರ ಭಗವಾನ್ ಶಿವನನ್ನು ಪೂಜಿಸಬೇಕು. ಇದರೊಂದಿಗೆ ನೀವು ಶಿವ ದೇವಾಲಯದಲ್ಲಿ ಕುಳಿತುಕೊಂಡು ‘ದಾರಿದ್ರ ದಹನ ಸ್ತೋತ್ರ’ವನ್ನೂ ಪಠಿಸಬೇಕು. ಇದರಿಂದ ಶಿವನು ನಿಮ್ಮ ದಾರಿದ್ರ್ಯಗಳನ್ನೆಲ್ಲಾ ದೂರಾಗಿಸುತ್ತಾನೆ.
ಇದರ ನೈವೇದ್ಯ ಮಾಡಿ
ಸೋಮವಾರದ ದಿನದಂದು ಶಿವಲಿಂಗವನ್ನು ಪೂಜಿಸುವಾಗ, ನೀರು ಮತ್ತು ಹಾಲು ಹೊರತುಪಡಿಸಿ, ಎಳ್ಳು ಮತ್ತು ಬಾರ್ಲಿಯನ್ನು ನೈವೇದ್ಯ ಮಾಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ.
ಈ ಸ್ತೋತ್ರ ಪಠಿಸಿ
ಒಬ್ಬ ವ್ಯಕ್ತಿಯು ತನ್ನ ಜಾತಕದಲ್ಲಿ ಚಂದ್ರದೋಷವನ್ನು ಹೊಂದಿದ್ದರೆ, ಅವನು ಚಂದ್ರದೇವನನ್ನು ಮೆಚ್ಚಿಸಲು ಸೋಮವಾರದಂದು ಭೋಲೆನಾಥನನ್ನು ಪೂಜಿಸಿದ ನಂತರ 'ಚಂದ್ರಶೇಖರ ಸ್ತೋತ್ರ'ವನ್ನು ಸಹ ಪಠಿಸಬೇಕು. ಇದು ಜಾತಕದಲ್ಲಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಹಾಗೂ ಚಂದ್ರ ದೋಷದಿಂದ ಆ ವ್ಯಕ್ತಿಗೆ ಮುಕ್ತಿಯನ್ನು ನೀಡುತ್ತದೆ.
ಇವರಿಗೆ ಆಹಾರ ನೀಡಿ
ಶಾಸ್ತ್ರದ ಪ್ರಕಾರ, ಬಡವರಿಗೆ ಆಹಾರ ನೀಡುವುದು ಪುಣ್ಯದ ಕಾರ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಸೋಮವಾರದ ದಿನ ಮುಸ್ಸಂಜೆ ಸಮಯದಲ್ಲಿ ನೀವು ಯಾವುದೇ ಬಡವರಿಗೆ ಅಥವಾ ನಿರ್ಗತಿಕರಿಗೆ ಆಹಾರವನ್ನು ನೀಡಿದರೆ, ಆ ಮನೆಯಲ್ಲಿ ಅನ್ನಪೂರ್ಣ ದೇವಿ ನೆಲೆಸುತ್ತಾಳೆ.
ನಿಮ್ಮ ಪ್ರತಿಕ್ರಿಯೆ ಏನು?






