ಹರಾಜಿನಲ್ಲಿ RCB ಮಾಡಿದ್ದು ಸರೀನಾ!? ಕೊಹ್ಲಿ ಶಿಶ್ಯನ ಖರೀದಿಗೆ ಮುಂದಾಗದಿರಲು ಕಾರಣ ಏನು!?

ಡಿಸೆಂಬರ್ 5, 2024 - 09:19
 0  16
ಹರಾಜಿನಲ್ಲಿ RCB ಮಾಡಿದ್ದು ಸರೀನಾ!? ಕೊಹ್ಲಿ ಶಿಶ್ಯನ ಖರೀದಿಗೆ ಮುಂದಾಗದಿರಲು ಕಾರಣ ಏನು!?

IPL ಮೆಗಾ ಹರಾಜಿನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಬಿಮಾನಿಗಳ ಲೆಕ್ಕಾಚಾರ ತಲೆ ಕೆಡುವಂತೆ ಮಾಡಿದೆ. ಇಂತವರನ್ನೇ ಖರೀದಿಸುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದೆ. 

ಮುಂದಿನ ಸೀಸನ್​ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಆರ್​​ಸಿಬಿ ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಲಪಡಿಸಲು ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. 

ಇದಕ್ಕೂ ಮುನ್ನ ಆರ್​​ಸಿಬಿ ರಜತ್ ಪಟಿದಾರ್, ವಿರಾಟ್ ಕೊಹ್ಲಿ, ಯಶ್‌ ದಯಾಳ್‌ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಹರಾಜಿನಲ್ಲಿ ಒಟ್ಟು 19 ಆಟಗಾರ ಖರೀದಿ ಮಾಡಿದ್ದು, ಈಗ ಆರ್​​ಸಿಬಿ 22 ಸದಸ್ಯರ ಬಲಿಷ್ಠ ತಂಡವಾಗಿದೆ. ಆದರೆ, ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗಿದೆ.

ಆ ಪ್ಲೇಯರ್​ ಮತ್ಯಾರು ಅಲ್ಲ, ಸುಯಾಶ್ ಪ್ರಭುದೇಸಾಯಿ. ಇವರನ್ನು ಹರಾಜಿನಲ್ಲೂ ಆರ್​​ಸಿಬಿ ಬಿಡ್​ ಮಾಡಲಿಲ್ಲ.

ಆರ್​​ಸಿಬಿ ತಂಡದ ಯುವ ಬ್ಯಾಟರ್​​ ಸುಯಾಶ್ ಪ್ರಭುದೇಸಾಯಿ. ಎರಡು ಸೀಸನ್​ಗಳ ಹಿಂದೆ 2023ರ ಐಪಿಎಲ್​ನಲ್ಲಿ ಆರಂಭದಲ್ಲಿ ಆರ್​​ಸಿಬಿ ಪರ ಕಮಾಲ್​ ಮಾಡಿದ್ದ ಈತ ನಂತರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. 2023ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ 5 ಪಂದ್ಯ ಆಡಿದ್ದ ಸುಯಾಶ್ ಪ್ರಭುದೇಸಾಯಿ ಗಳಿಸಿದ್ದು ಕೇವಲ 35 ರನ್​​. ಅದರಲ್ಲೂ ಕೇವಲ 2 ಸಿಕ್ಸರ್​​ ಮತ್ತು 1 ಫೋರ್​ ಬಾರಿಸಿದ್ದ. ಇದರ ಪರಿಣಾಮ 2024ರ ಐಪಿಎಲ್​ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಆಡಿದ ಒಂದು ಪಂದ್ಯದಲ್ಲಿ ಕೇವಲ 24 ರನ್​ ಗಳಿಸಿದ್ದ. ಅದು ಅಷ್ಟು ಇಂಪ್ಯಾಕ್ಟ್​ ಇನ್ನಿಂಗ್ಸ್​ ಆಗಿರಲಿಲ್ಲ

ಒಟ್ಟಾರೆ RCB ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರನ್ನೇ ಕೈ ಬಿಟ್ಟಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow