ಹೊಸ ಟ್ವಿಸ್ಟ್ ಪಡೆದುಕೊಂಡ ಅಮೃತಾಧಾರೆ ಸೀರಿಯಲ್: ಭೂಮಿಕಾ ಮುಂದೆ ಶಕುಂತಲಾ ಅಸಲಿ ಮುಖ ಬಯಲು!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಸೀರಿಯಲ್ ಜನಮನ್ನಣೆ ಪಡೆದಿದೆ. ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅಭಿನಯಕ್ಕೆ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್ನಲ್ಲಿ ಗೌತಮ್ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಪ್ರತಿ ಹುಡುಗಿಗೂ ಮದುವೆ ಆಗೋ ಹುಡುಗನ ಬಗ್ಗೆ ಬೆಟ್ಟದಷ್ಟು ಕನಸು ಇರುತ್ತೆ. ವಿವಾಹ ನಂತರ ಹಾಗಿರ್ಬೇಕು. ಹೀಗ್ ಇರ್ಬೇಕು ಅನ್ನೋ ಆಸೆ ಇರುತ್ತೆ. ಭೂಮಿ ಕೂಡ ಅಷ್ಟೇ ಪ್ರಿಯತಮನ ಬಗ್ಗೆ ಕಟ್ಟಿದ್ದ ಕನಸುಗಳನ್ನ ಡೈರಿಯಲ್ಲಿ ಬರೆದಿಟ್ಟಿರ್ತಾಳೆ. ಡೈರಿ ಓದಿದ್ದ ಡುಮ್ಮು ಸರ್ ಪ್ರೀತಿಯ ಮಡದಿ ಕನಸನ್ನ ನನಸು ಮಾಡ್ತಿದ್ದಾರೆ. ಫಾರ್ಮಲ್ಸ್ ಬಿಟ್ಟು ಕಾಲೇಜ್ ಹುಡುಗನಂತೆ ಸಜ್ಜಾಗಿ ಭೂಮಿ ಜೊತೆ ರೋಮ್ಯಾಂಟಿಕ್ ರೈಡ್ ಹೊರಟಿದ್ದಾರೆ.
ಇನ್ನೂ, ಸೀರಿಯಲ್ ಸ್ಟೋರಿಗೆ ಬರೋದಾದ್ರೇ, ಗೌತಮ್ ತಾಯಿಗೆ ಹಳೆ ನೆನಪುಗಳು ಮರುಕಳಿಸಿವೆ. ಆದ್ರೆ ಶಕುಂತಲಾ ಕುತಂತ್ರಕ್ಕೆ ಕುಟುಂಬ ಸರ್ವನಾಶ ಆಗ್ಬಿಡುತ್ತೋ ಎಂಬ ಭಯದಲ್ಲೇ ಕಣ್ಮುಂದೆ ಇರೋ ಮಗ-ಮಗಳನ್ನ ಮುದ್ದಾಡೋಕೆ ಆಗ್ದೇ ತಾಯಿ ಜೀವ ಒದ್ದಾಡುತ್ತಿದೆ.
ಮತ್ತೊಂದು ಕಡೆ ಭೂಮಿ ಧರಸಿದ್ದ ಸರಕ್ಕೆ ಮೈಕ್ ಫಿಕ್ಸ್ ಮಾಡಿದ್ದಳು ಶಕುಂತಲಾ. ಈ ಸತ್ಯ ಬಯಲಾಗೋ ಸೂಚನೆ ಸಿಕ್ಕಿದ್ದು, ಭೂಮಿ ರಹಸ್ಯ ಕಾರ್ಯಾಚರಣೆ ಮಾಡ್ತಿದ್ದಾಳೆ.
ನಿಮ್ಮ ಪ್ರತಿಕ್ರಿಯೆ ಏನು?






