ʼಪಿಂಚಣಿʼ ಪಡೆಯಲು 2KM ತೆವಳಿಕೊಂಡೇ ಹೋದ 70 ವರ್ಷದ ವಿಕಲಚೇತನ ವೃದ್ಧೆ!

ಸೆಪ್ಟೆಂಬರ್ 26, 2024 - 22:00
 0  13
ʼಪಿಂಚಣಿʼ ಪಡೆಯಲು 2KM ತೆವಳಿಕೊಂಡೇ ಹೋದ 70 ವರ್ಷದ ವಿಕಲಚೇತನ ವೃದ್ಧೆ!

ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಸಿಗದ ಕುರಿತು ಅನೇಕ ದೂರುಗಳಿವೆ. ಅದೇ ರೀತಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ದಿವ್ಯಾಂಗ ಮಹಿಳೆಯೊಬ್ಬರು ವೃದ್ಧಾಪ್ಯವೇತನಕ್ಕಾಗಿ ತೆವಳುತ್ತಾ 2ಕಿ.ಮೀ ದೂರವಿರುವ ಪಂಚಾಯತ್ ಕಚೇರಿಗೆ ಬಂದ ಘಟನೆ ಜರುಗಿದೆ. ಪಥೂರಿ ದೆಹುರಿ ಎಂಬ ಹಿರಿಯ ಮಹಿಳೆ ಜೀವನೋಪಾಯಕ್ಕಾಗಿ ಪಿಂಚಣಿಯನ್ನೇ ಅವಲಂಬಿಸಿದ್ದಾರೆ ಮತ್ತು ಅವರ ಸಹಾಯಕ್ಕೆ ಯಾರೂ ಇಲ್ಲ. ಪಥೂರಿ ಅವರ ವಯಸ್ಸು ಮತ್ತು ಹಿಂದಿನ ಅಪಘಾತದಿಂದ ನಡೆಯಲು ಸಾಧ್ಯವಿಲ್ಲ.

ಸರ್ಕಾರವು ಫಲಾನುಭವಿಗಳ ಬಾಗಿಲಿಗೇ ಕಲ್ಯಾಣ ಪಿಂಚಣಿಗಳನ್ನು ತಲುಪಿಸಬೇಕೆಂಬ ನಿಯಮವಿದ್ದರೂ ಈ ಮಹಿಳೆ ಪಂಚಾಯತ್ ಕಚೇರಿಗೆ ಅಲೆಯುವಂತಾಗಿದೆ. ಇದು ಆಕೆಯ ಕೈ ಹಾಗೂ ಕಾಲಿನಲ್ಲಿ ಗುಳ್ಳೆಗಳು ಬರುವಂತೆ ಮಾಡಿದೆ. ಪಂಚಾಯತ್​ನ ಕಾರ್ಯನಿರ್ವಾಹಕ ಅಧಿಕಾರಿ ಪಿಂಚಣಿ ಪಡೆಯಲು ಕಚೇರಿಗೆ ಬರುವಂತೆ ಹೇಳಿದ್ದರು. ಬೇರೆ ದಾರಿ ಇಲ್ಲದೆ ಸಹಾಯ ಮಾಡುವವರು ಯಾರೂ ಇಲ್ಲದೆ 2 ಕಿ.ಮೀ ದೂರ ತೆವಳುತ್ತಾ ಬಂದಿದ್ದಾರೆ.

ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಿದಾಗ ಘಟನೆಯನ್ನು ಒಪ್ಪಿಕೊಂಡರೂ ಮಹಿಳೆಯ ಕಷ್ಟದ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಹೇಳಿದರು. ಈ ಹಿಂದೆ ಪಿಂಚಣಿ ಪಡೆಯಲು ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು, ಆದರೆ ಅಪಘಾತದಲ್ಲಿ ಆಕೆಯ ಕಾಲಿಗೆ ಹಾನಿಯಾದ ನಂತರ ಅವರ ಮನೆಯವರು ಅಥವಾ ನಮ್ಮ ಕಚೇರಿಯ ಪ್ಯೂನ್ ಅವರ ಪಿಂಚಣಿಯನ್ನು ಅವರ ಮನೆಗೆ ತಲುಪಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow