ಅಂಬರೀಶ್ ಆಸೆ ಈಡೇರಿಸಿದ ರಾಕಿಂಗ್ ಸ್ಟಾರ್ ಯಶ್! ಮಂಡ್ಯದ ಮೊಮ್ಮಗನಿಗಾಗಿ ಕಲಘಟಗಿಯಲ್ಲಿ ತೊಟ್ಟಿಲು ಸಿದ್ಧ!

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದಪ್ಪ ಕುಟುಂಬದಲ್ಲಿ ಖುಷಿ ಮೂಡಿ, ಅವಿವಾ ಅವರು ಗಂಡುಮಗುವಿಗೆ ಜನ್ಮ ನೀಡಿರುವುದು ಎಲ್ಲಾರಿಗೂ ಗೊತ್ತಿರುವ ವಿಚಾರ, ಇದೀಗ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ನಟಿ ಸುಮಲತಾ ಅವರ ಮೊಮ್ಮಗ, ಅಭಿಷೇಕ ಅಂಬರೀಶ್ ಅವರ ಮಗನ ನಾಮಕರಣ ಸಮಾರಂಭ ಮಾ.14ರಂದು ನಿಗದಿಯಾಗಿದ್ದು, ಇದಕ್ಕಾಗಿ ಕಲಘಟಗಿಯಲ್ಲಿ ವಿಶೇಷ ತೊಟ್ಟಿಲೊಂದು ಸಿದ್ಧವಾಗಿದೆ.
ಸಾವಕಾರ ಅವರ ಮನೆಯಲ್ಲಿ ಪುಟ್ಟ ಅಲಂಕೃತ ತೊಟ್ಟಿಲು ಸಿದ್ಧವಾಗಿದ್ದು, ಸದ್ಯದಲ್ಲೇ ಅಂಬರೀಶ ಅವರ ಮನೆ ಸೇರಲಿದೆ. ಈ ಮೊದಲು ಡಾ. ರಾಜಕುಮಾರ್, ಯಶ್ ಅವರ ಮನೆಗೆ ಕಲಘಟಗಿ ತೊಟ್ಟಿಲು ಹೋಗಿದ್ದವು. ಆರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ತೊಟ್ಟಲಿನ ಮೇಲೆ ಚಿತ್ರಗಳನ್ನು ಬರೆದಿರುವುದು ಮತ್ತು ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ, ತೊಟ್ಟಿಲಿನಲ್ಲಿ ಮಲಗಿದ ಮಗು ದೇವರ ಸನ್ನಿಧಾನದಲ್ಲಿ ಇರುವ ಚಿತ್ರವಿರುವುದು ವಿಶೇಷವಾಗಿದೆ.
ರಾಧಿಕಾ ಪಂಡಿತ್ ಗರ್ಭಿಣಿ ಆಗಿದ್ದಾಗ ಯಾರಿಗೂ ಹೇಳದೆ ಕಲಘಟಗಿ ತೊಟ್ಟಿಲು ಮಾಡಲು ಅಂಬಿ ಆರ್ಡರ್ ಕೊಟ್ಟಿದ್ದರು. ಅಂಬಿ ಅಗಲಿ ಅದೆಷ್ಟೋ ದಿನ ಕಳೆದ ಮೇಲೆ ತೊಟ್ಟಿಲು ರೆಡಿಯಾಗಿದೆ ಎಂದು ಮೆಸೇಜ್ ಬರುತ್ತದೆ ಹಾಗೂ ಅದನ್ನು ಯಶ್ ಮನೆಗೆ ಪಾರ್ಸಲ್ ಮಾಡಲಾಗುತ್ತದೆ.
ಇದನ್ನು ಸ್ವತಃ ಸುಲಮಲತಾ ಅವರಿಗೆ ಶಾಕಿಂಗ್.ತೊಟ್ಟಿಲು ವಿಶೇಷತೆಗಳನ್ನು ತಿಳಿದು ಯಶ್ ಫ್ಯಾಮಿಲಿ ಶಾಕ್ ಆಗಿದ್ದಾರೆ. ಎಂಥಾ ಅರ್ಥಪೂರ್ಣ ಉಡುಗೊರೆ ನೀಡಿದ್ದಾರೆ ಎಂದು. ನನ್ನ ಮೊಮ್ಮಗ ಕೂಡ ಅದೇ ರೀತಿ ತೊಟ್ಟಿನಲ್ಲಿ ಬೆಳೆಯಬೇಕು ಎಂದು ಆಪ್ತರ ಬಳಿ ಅಂಬಿ ಹೇಳಿಕೊಂಡಿದ್ದರಂತೆ. ಹೀಗಾಗಿ ಸುಮಲತಾ ಮತ್ತು ಅಭಿ ಆಸೆ ಈಡೇರಿಸುತ್ತಿದ್ದಾರೆ.
ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಮಗಳ ನಾಮಕರಣಕ್ಕೂ ಕಲಘಟಗಿ ತೊಟ್ಟಿಲು ತಯಾರಿಸಿ ಕೊಡಲಾಗಿತ್ತು. ಸೂಕ್ಷ್ಮಕೆತ್ತನೆ, ಸಾಂಪ್ರದಾಯಿಕ ಬಣ್ಣದ ಬಳಕೆ, ಜನಪದ ಸಂಸ್ಕೃತಿ ಸಾರುವ ಚಿತ್ರಗಳು, ಹಿಂದೂ ಪುರಾಣದ ಕಥೆ ವಿವರಿಸುವ ಚಿತ್ರದ ಸಾಲುಗಳನ್ನು ಗಮನಿಸಿದ್ದ ಅಂಬರೀಶ ಅವರು ತಮ್ಮ ಮೊಮ್ಮಕ್ಕಳ ನಾಮಕರಣಕ್ಕೆ ಕಲಘಟಗಿ ತೊಟ್ಟಿಲು ಇರಲೇಬೇಕು ಎಂದು ಆಪ್ತರ ಎದುರು ಮನದ ಮಾತು ಹಂಚಿಕೊಂಡಿದ್ದರು. ಅಂಬರೀಶ ಪತ್ನಿ ಸುಮಲತಾ, ಮಗ ಅಭಿಷೇಕ ಹಾಗೂ ಅವರ ಆಪ್ತರು ಇದೀಗ ಅಂಬರೀಶ ಅವರ ಆಶಯ ಈಡೇರಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






