ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ: ಕೆಎಸ್ ಈಶ್ವರಪ್ಪ

ಜೂನ್ 21, 2025 - 15:56
 0  7
ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ: ಕೆಎಸ್ ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ 15% ಮೀಸಲಾತಿಗೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ.

ಹಿಂದುಳಿದವರು ದಲಿತರಿಗೆ ಅನ್ಯಾಯ ಆಗಿದೆ. ಅಹಿಂದ ಹೆಸರೇಳಿಕೊಂಡು ಮೇಲೆ ಬಂದ ಸಿದ್ದರಾಮಯ್ಯ ಈಗ ಹಿಂದ ಮರೆತು ಕೇವಲ ಅಂತಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೆಲ್ಲ ಬೇಕೋ ಎಲ್ಲ ಮಾಡುತ್ತಿದ್ದಾರೆ,

ಇದು ದುರಾದೃಷ್ಟಕರ. 15% ಮೀಸಲಾತಿ ಕೊಡಲು ನಾವು ಬಿಡಲ್ಲ, ಹೋರಾಟ ಮಾಡುತ್ತೇವೆ. ಬರೀ ಮುಸಲ್ಮಾನರ ಕಡೆ ಸರ್ಕಾರ ತಿರುಗಿದರೆ ಭಾರೀ ಪೆಟ್ಟು ಖಚಿತ. ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಯಾರೂ ಒಪ್ಪಲ್ಲ. ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಕಳಿಸಿದರೆ ಸಹಿ ಹಾಕಬಾರದು. ನಿರ್ಣಯವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow