ಛೇ.. ಹಠ ಮಾಡ್ತಿದ್ದ ಮಗುವಿನ ಕೈಗೆ ಬರೆ, ಡೈಪರ್ʼಗೆ ಖಾರದ ಪುಡಿ ಹಾಕಿ ವಿಕೃತಿ..!

ರಾಮನಗರ: ಮಕ್ಕಳು ಅಂದ್ರೆ ಹಠಕ್ಕೆ ಇನ್ನೊಂದು ಹೆಸರು. ಅವರಿಗೆ ಬೇಕಾಗಿದ್ದು ಸಿಗದೇ ಇದ್ದಲ್ಲಿ, ಅವರು ಬೇಡಿದ್ದು ಕೊಡಿಸದೇ ಇದ್ದಲ್ಲಿ ಮಕ್ಕಳು ಹಠಕ್ಕೆ ಬೀಳುತ್ತಾರೆ. ಅವರನ್ನು ಸಮಾಧಾನಿಸುವುದು ಅವರನ್ನು ನೋಡಿಕೊಳ್ಳುವ ಕರ್ತವ್ಯವಾಗಿರುತ್ತದೆ.
ಆದ್ರೆ ಇಲ್ಲೊಬ್ಬ ಅಂಗನವಾಡಿ ಸಹಾಯಕಿ ಮಗು ಹಠ ಮಾಡುತ್ತಿದೆ ಎಂದು ಮಗುವಿನ ಕೈಗೆ ಬರೆ ಎಳೆದು, ಡೈಪರ್ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ಕನಕಪುರ ತಾಲೂಕಿನ ಮಹರಾಜಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮೇಶ್ ಹಾಗೂ ಚೈತ್ರಾ ದಂಪತಿಯ ಎರಡೂವರೆ ವರ್ಷದ ಮಗು ಮೇಲೆ ಅಂಗನವಾಡಿ ಸಹಾಯಕಿ ಹಲ್ಲೆ ಮಾಡಿದ್ದರು. ಅಂಗನವಾಡಿಯಲ್ಲಿ ಮಗು ಹಠ ಮಾಡ್ತಿದೆ ಎಂದು ಕೈ ಮೇಲೆ ಬರೆ ಹಾಕಿ ಬಳಿಕ ಡೈಪರ್ ಒಳಗೆ ಚಂದ್ರಮ್ಮ ಖಾರದಪುಡಿ ಹಾಕಿದ್ದರು.
ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರಿಗೆ ಹಲ್ಲೆಯ ವಿಚಾರ ತಿಳಿದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಂಗನವಾಡಿ ಸಹಾಯಕಿ ಚಂದ್ರಮ್ಮ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






