ದರ್ಶನ್ ಕೈ ಹಿಡಿದು ಹೊರಬಂದ ಪವಿತ್ರಾ.. ಮತ್ತೆ ಸುಬ್ಬನ ಪ್ರೀತಿ ಬಯಸಿದ ಸುಬ್ಬಿ! ಕೋರ್ಟ್ ನಲ್ಲಿ ನಡೆದಿದ್ದೇನು?

ಮೇ 20, 2025 - 14:15
 0  35
ದರ್ಶನ್ ಕೈ ಹಿಡಿದು ಹೊರಬಂದ ಪವಿತ್ರಾ.. ಮತ್ತೆ ಸುಬ್ಬನ ಪ್ರೀತಿ ಬಯಸಿದ ಸುಬ್ಬಿ! ಕೋರ್ಟ್ ನಲ್ಲಿ ನಡೆದಿದ್ದೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪ್ರಣಯ ಪಕ್ಷಿಗಳಂತಿದ್ದ ಪವಿತ್ರಾ - ದರ್ಶನ್ ರೇಣುಕಾಸ್ವಾಮಿ ಕೊಲೆ ಬಳಿಕ ದೂರ ದೂರ ಆಗಿದ್ದಾರೆ. ದರ್ಶನ್ ತಾವಾಯ್ತು ತಮ್ಮ ಫ್ಯಾಮಿಲಿ ಆಯ್ತು ಅಂತ ಇದ್ದಾರೆ. ಆದರೆ ಇಂದು ಕೊಲೆ ಪ್ರಕರಣದ ಸಂಬಂಧ ಕೋರ್ಟ್ ವಿಚಾರಣೆಗೆ ದರ್ಶನ್ & ಪವಿತ್ರ ಹಾಜರಾಗಿದ್ದರು. ಈ ವೇಳೆ ಇಬ್ಬರು ಪ್ರಣಯ ಪಕ್ಷಿಗಳು ಮತ್ತೆ ಒಂದಾಗುವ ಮುನ್ಸೂಚನೆ ಸಿಕ್ಕಿದೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಇಂದು 57ನೇ ಸಿಸಿಹೆಚ್‌ ನ್ಯಾಯಾಲಯಕ್ಕೆ ಹಾಜರಾದರು. ಪವಿತ್ರಾ ಗೌಡ ಬಿಳಿ ಬಣ್ಣದ ಸೀರೆ ಧರಿಸಿದ್ದರೆ ದರ್ಶನ್‌ ಕಪ್ಪು ಬಣ್ಣ ಡ್ರೆಸ್‌ ಧರಿಸಿದ್ದರು. 

ಸ್ನೇಹಿತ ಧನ್ವೀರ್ ಜೊತೆ ದರ್ಶನ್ ನ್ಯಾಯಾಲಯಕ್ಕೆ ಆಗಮಿಸಿದರು. ವಿಚಾರಣೆ ಆರಂಭವಾಗುತ್ತಿದ್ದಾಗ ದರ್ಶನ್‌ ದೂರದಲ್ಲಿ ನಿಂತಿದ್ದರು. ಹೆಸರನ್ನು ಕರೆದಾಗಲೂ ದರ್ಶನ್ ದೂರದಲ್ಲೇ ಇದ್ದರು. ಈ ವೇಳೆ ಜಡ್ಜ್‌ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿ ಪವಿತ್ರಾ ಗೌಡ ಬಳಿ ನಿಲ್ಲಲು ಹೇಳಿದರು. ಜಡ್ಜ್‌ ಸೂಚನೆಯ ನಂತರ ದರ್ಶನ್‌ ಪವಿತ್ರಾ ಗೌಡ ಬಳಿ ಬಂದು ನಿಂತುಕೊಂಡರು.  ಕೋರ್ಟ್‌ನಲ್ಲಿ ಪರಸ್ಪರ ಮಾತನಾಡದ ಸುಬ್ಬ ಸುಬ್ಬಿ ಲಿಫ್ಟ್‌ನಲ್ಲಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್‌ ಹೊಸ ಫೋನ್‌ ನಂಬರ್‌ ಪಡೆಯಲು ಪವಿತ್ರಾ ಗೌಡ ಮುಂದಾದ್ರೂ ಎನ್ನಲಾಗುತ್ತಿದೆ.

ಇಂದಿನ ವಿಚಾರಣೆಗೆ ಎ3 ಪವನ್ ಗೈರಾಗಿದ್ದರೆ ಎ11 ನಾಗರಾಜು ಕೇಸ್ ಮೇಲೆ ಹೊಸಪೇಟೆಗೆ ತೆರಳಲು ಅನುಮತಿ ನೀಡಿತು. ಆರೋಪಿಗಳ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿಕೆ ಮಾಡಲಾಯಿತು. ಕೋರ್ಟ್‌ ಪವಿತ್ರಾ ಗೌಡಗೆ 15 ದಿನ ಹೊರರಾಜ್ಯಕ್ಕೆ ತೆರಳಲು ಅವಕಾಶ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow