ನಟಿ ಅಮೂಲ್ಯ ಗೌಡ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್! ಶ್ರೀಗೌರಿ ಸೀರಿಯಲ್ ಮುಕ್ತಾಯ

ಡಿಸೆಂಬರ್ 22, 2024 - 19:59
 0  14
ನಟಿ ಅಮೂಲ್ಯ ಗೌಡ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್! ಶ್ರೀಗೌರಿ ಸೀರಿಯಲ್ ಮುಕ್ತಾಯ

‘ಬಿಗ್ ಬಾಸ್‌ ಕನ್ನಡ 10’ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿದ್ದ ಹೊಸ ಧಾರಾವಾಹಿ ‘ಶ್ರೀಗೌರಿ’. ಆರಂಭದಲ್ಲೇ ಈ ಧಾರಾವಾಹಿ ಕುತೂಹಲ ಕೆರಳಿಸಿತ್ತು. ಇದೀಗ ಅಭಿಮಾನಿಗಳಿಗೆ ಶಾಂಕ್‌ ನೀಡಿದೆ. ಹೌದು ಕಮಲಿ ಸೀರಿಯಲ್‌ ಮೂಲಕ ಗಮನ ಸೆಳೆದ ಅಮೂಲ್ಯ ಗೌಡ ಶ್ರೀಗೌರಿಯಾಗಿ ಕಾಣಿಸಿಕೊಂಡಿದ್ದರೆ, ನಾಯಕನಾಗಿ ಕಾರ್ತಿಕ್ ಅತ್ತಾವರ್ ನಟಿಸಿದ್ದಾರೆ.

ಇನ್ನು ಸುನೀಲ್‌ ಪುರಾಣಿಕ್‌ ತಂದೆಯ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗ ಈ ಧಾರಾವಾಹಿ ಅಂತ್ಯ ಕಾಣಲಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಧಾರಾವಾಹಿ, ‘ನೂರು ಜನ್ಮಕೂ ಧಾರಾವಾಹಿಗೆ ಜಾಗ ಮಾಡಿಕೊಡುತ್ತಿದೆ ಎನ್ನಲಾಗುತ್ತಿದೆ. ಹೊಸ ಧಾರಾವಾಹಿಗಾಗಿ, ಶ್ರೀಗೌರಿ ಸೀರಿಯಲ್‌ ಕೊನೆಯಾಗುತ್ತಿದೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ವೀಕ್ಷಕರು ಬೇಸರ ಹೊರ ಹಾಕಿದ್ದಾರೆ. ಯಾಕೆ ಇಷ್ಟು ಬೇಗ ಮುಗಿತಾ ಇದೆ? ರೇಟಿಂಗ್ ಕಡಿಮೆ ಇದೆಯಾ? ಉತ್ತಮ ಧಾರಾವಾಹಿ ಬೇಗ ಮುಗಿಯುತ್ತಿದೆ ಅಂತ ಕಾಮೆಂಟ್ಸ್​ ಹಾಕುವ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ. ಇನ್ನೂ, ಶ್ರೀಗೌರಿ ಧಾರಾವಾಹಿಯ ಜಾಗಕ್ಕೆ ಎಂದರೆ 8.30ರ ಸ್ಲಾಟ್​ಗೆ ಹೊಚ್ಚ ಹೊಸ ಕಥೆ ಎಂಟ್ರಿಯಾಗಿದೆ. ಅದುವೇ ನೂರು ಜನ್ಮಕೂ ಧಾರಾವಾಹಿ. ಇದೇ ಸೀರಿಯಲ್​ನಲ್ಲಿ ಗೀತಾ ಖ್ಯಾತಿಯ ನಟ ಧನುಷ್​ ಹೀರೋ ಆಗಿದ್ದಾರೆ.

ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow