ನಿರುದ್ಯೋಗಿಗಳ ಗಮನಕ್ಕೆ: ಕೊಪ್ಪಳದಲ್ಲಿ ಖಾಲಿ ಇದೆ ಕೆಲಸ, ಇಲ್ಲಿದೆ ಸಂಪೂರ್ಣ ಮಾಹಿತಿ !

ಫೆಬ್ರವರಿ 18, 2025 - 08:00
 0  7
ನಿರುದ್ಯೋಗಿಗಳ ಗಮನಕ್ಕೆ: ಕೊಪ್ಪಳದಲ್ಲಿ ಖಾಲಿ ಇದೆ ಕೆಲಸ, ಇಲ್ಲಿದೆ ಸಂಪೂರ್ಣ ಮಾಹಿತಿ !

ನಿರುದ್ಯೋಗಿಗಳು ಗಮನವಿಟ್ಟು ಓದಲೇಬೇಕಾದ ಸ್ಟೋರಿ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. 

ಕೊಪ್ಪಳ ಜಿಲ್ಲಾ 2 ಹಾಗೂ ಕನಕಗಿರಿ ಯೋಜನಾ ಮಟ್ಟದಲ್ಲಿ 1 ಸೇರಿ ಒಟ್ಟು 3 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಸರ್ಕಾರದ ಆದೇಶ ನಿರ್ದೆಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಪತ್ರ ಸಂಖ್ಯೆ ಅನ್ವಯ ಪೋಷಣ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಂಯೋಜಕರು, ಜಿಲ್ಲಾ ಕಾರ್ಯಕ್ರಮ ಸಹಾಯಕರ ಹುದ್ದೆ ಹಾಗೂ ಕನಕಗಿರಿ ಯೋಜನೆಯಲ್ಲಿ ತಾಲೂಕು ಸಂಯೋಜಕರ ಹುದ್ದೆ ಒಟ್ಟು ಖಾಲಿಯಿರುವ 3 ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.

ಪೋಷಣ ಅಭಿಯಾನ ಯೋಜನೆಯ ಜಿಲ್ಲೆಯಲ್ಲಿ ಜಾರಿಯಲ್ಲಿರುವವರೆಗೆ ಮಾತ್ರ ಎಂಬ ಷರತ್ತುಗಳು ಒಳಪಟ್ಟು ನೇರ ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಜಿಲ್ಲಾ ಸಂಯೋಜಕರ, ಜಿಲ್ಲಾ ಕಾರ್ಯಕ್ರಮ ಸಹಾಯಕರ ಮತ್ತು ಕನಕಗಿರಿ ಯೋಜನೆಯ ತಾಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು 4/3/2025ರೊಳಗೆ ಅರ್ಜಿ ಸಲ್ಲಿಸಬೇಕು.

ಹುದ್ದೆಯ ವಿವರಗಳು: ಜಿಲ್ಲಾ ಸಂಯೋಜಕ ಒಂದು ಹುದ್ದೆ. ಅಭ್ಯರ್ಥಿ ಪದವಿ ಪಡೆದಿರಬೇಕು/ ವಿಜ್ಞಾನ ಅಥವ ಐಟಿ ವಿಷಯದಲ್ಲಿ ಡಿಪ್ಲೊಮಾ ಹೊಂದಿರಬೇಕು. ಅಪ್ಲಿಕೇಶನ್ ನಿರ್ವಹಣೆ ವಿಷಯದಲ್ಲಿ 2 ವರ್ಷದ ಅನುಭವ. ಸ್ಥಳೀಯ ಭಾಷೆಯಲ್ಲಿ ಉತ್ತಮವಾಗಿ ಮಾತನಾಡುವ/ ಬರೆಯುವ ಕೌಶಲ್ಯ ಹೊಂದಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಸಂಚಾರ ನಡೆಸುವುದು ಕಡ್ಡಾಯ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಜಿಲ್ಲಾ ಕಾರ್ಯಕ್ರಮ ಸಹಾಯಕ ಒಂದು ಹುದ್ದೆ. ಪದವಿ ಪಡೆದಿರಬೇಕು/ ಮ್ಯಾನೇಜ್‌ಮೆಂಟ್/ ಸಮಾಜ ವಿಜ್ಞಾನ/ ನ್ಯುಟ್ರಿಷಿಯನ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹೊಂದಿರಬೇಕು. ಸಾಮರ್ಥ್ಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಕೌಶಲ್ಯಗಳ ವಿಷಯದಲ್ಲಿ 2 ವರ್ಷದ ಅನುಭವ. ಸ್ಥಳೀಯ ಭಾಷೆಯಲ್ಲಿ ಉತ್ತಮವಾಗಿ ಮಾತನಾಡುವ/ ಬರೆಯುವ ಕೌಶಲ್ಯ, ಕಂಪ್ಯೂಟರ್ ಜ್ಞಾನ/ ಇ-ಮೇಲ್ ಕಳಿಸುವುದು, ಗುಂಪು ಚರ್ಚೆ, ಸಂಚಾರ ನಡೆಸುವುದು ಕಡ್ಡಾಯ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ.

ಜಿಲ್ಲಾ ಕಾರ್ಯಕ್ರಮ ಸಹಾಯಕ ಒಂದು ಹುದ್ದೆ. ಪದವಿ ಪಡೆದಿರಬೇಕು/ ಮ್ಯಾನೇಜ್‌ಮೆಂಟ್/ ಸಮಾಜ ವಿಜ್ಞಾನ/ ನ್ಯುಟ್ರಿಷಿಯನ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹೊಂದಿರಬೇಕು. ಸಾಮರ್ಥ್ಯ ಅಭಿವೃದ್ಧಿ, ಸಾಮರ್ಥ್ಯ ಅಭಿವೃದ್ಧಿ ಕೌಶಲ್ಯಗಳ ವಿಷಯದಲ್ಲಿ 2 ವರ್ಷದ ಅನುಭವ. ಸ್ಥಳೀಯ ಭಾಷೆಯಲ್ಲಿ ಉತ್ತಮವಾಗಿ ಮಾತನಾಡುವ/ ಬರೆಯುವ ಕೌಶಲ್ಯ, ಕಂಪ್ಯೂಟರ್ ಜ್ಞಾನ/ ಇ-ಮೇಲ್ ಕಳಿಸುವುದು, ಗುಂಪು ಚರ್ಚೆ, ಸಂಚಾರ ನಡೆಸುವುದು ಕಡ್ಡಾಯ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ಕೊಡಲಾಗಿದೆ. 

ಅರ್ಜಿ ನಮೂನೆಯನ್ನು ಈ ಕಛೇರಿಯಿಂದ ಪಡೆದುಕೊಳ್ಳಬೇಕು. ಅರ್ಹ ಅಭ್ಯರ್ಥಿಗಳು ಮಾರ್ಚ್ 4ರ ಸಂಜೆ 5.30ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow