ಫಿನಾಲೆ ಹತ್ತಿರದಲ್ಲೇ ಎಡವಟ್ಟು ಮಾಡಿಕೊಂಡ್ರಾ ಧನರಾಜ್!? ಮುಖ್ಯದ್ವಾರ ಓಪನ್ ಮಾಡಿದ್ದೇಕೆ ಬಿಗ್ ಬಾಸ್!?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರೋದು ಗ್ಯಾರಂಟಿ ಎನ್ನೋದು ಸುದೀಪ್ ಕೂಡ ಹೇಳಿದ್ದರು. ಭವ್ಯಾ, ಗೌತಮಿ, ಉಗ್ರಂ ಮಮಜು, ರಜತ್, ತ್ರಿವಿಕ್ರಮ್ ಈಗ ಡೇಂಜರ್ಸ್ ಝೋನ್ನಲ್ಲಿ ಇದ್ದಾರೆ. ಏಕಾ ಏಕಿ ಮನೆಯಲ್ಲಿ ಸೈರನ್ ಮಾಡಿ ಎಲಿಮಿನೇಷನ್ಗೆ ಸಿದ್ದರಾಗಿ ಅಂತ ಬಿಗ್ ಬಾಸ್ ಆದೇಶ ಕೂಡ ಕೊಟ್ಟಿದ್ದರು.
ಧನರಾಜ್ ಅವರು ಟಾಸ್ಕ್ನ ಮೋಸದಿಂದ ಗೆದ್ದ ಆರೋಪ ಇದೆ. ಕನ್ನಡಿಯಲ್ಲಿ ನೋಡಿ ಆಡಿದ್ದರಿಂದ ಆಟ ಅವರಿಗೆ ಸುಲಭ ಆಯಿತು. ಹೀಗಾಗಿ, ಗೆಲುವು ಅವರದ್ದಾಯಿತು. ಆದರೆ, ಈ ಆಟವನ್ನು ಬಿಗ್ ಬಾಸ್ ರದ್ದು ಮಾಡಿರಲಿಲ್ಲ. ಧನರಾಜ್ ಮಿಡ್ ವೀಕ್ ಎಲಿಮಿನೇಷ್ನಿಂದ ಬವಾಚ್ ಆಗಲು ಈ ಗೆಲುವು ಸಾಕಷ್ಟು ಪ್ರಾಮುಖ್ಯತೆ ವಹಿಸಿತ್ತು. ಆದರೆ, ಈಗ ಈ ಗೆಲವು ಅವರಿಗೆ ಮುಳುವಾಗಿದೆ.
ಬಿಗ್ಬಾಸ್ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಮೋಕ್ಷಿತಾ, ಮಂಜು, ಗೌತಮಿ. ಹನುಮಂತ, ರಜತ್ ಹಾಗೂ ಧನರಜ್ ಇದ್ದಾರೆ. ಆದರೆ ಈ ವಾರ ಬಿಗ್ಬಾಸ್ ಮನೆಯಲ್ಲಿ ಯಾರೂ ಊಹಿಸಲಾರದ ಟ್ವಿಸ್ಟ್ವೊಂದು ಎದುರಾಗಿದೆ. ಈ ವಾರ ಬಿಗ್ಬಾಸ್ ಸ್ಪರ್ಧಿಗಳಿಗೆ ವಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ ಎಂದು ಎಚ್ಚರಿ ಕೊಟ್ಟಿದ್ದರು.
ಇನ್ನೂ, ನಾಮಿನೇಷನ್ನಿಂದ ತಪ್ಪಿಸಿಕೊಳ್ಳಲು ಬಿಗ್ಬಾಸ್ ಸ್ಪರ್ಧಿಗಳಿಗೆ ಕಾಲ ಕಾಲಕ್ಕೆ ಟಾಸ್ಕ್ಗಳನ್ನು ನೀಡುತ್ತಾ ಬಂದ್ದಿದ್ದರು. ಅಚ್ಚರಿ ಎಂಬಂತೆ ವಾರದ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಆಚಾರ್ಯ ಗೆದ್ದುಕೊಂಡು ಈ ವಾರದ ನಾಮಿನೇಷನ್ನಿಂದ ಸೇಫ್ ಆಗಿದ್ದರು. ಇದೀಗ ಬಿಗ್ಬಾಸ್ ಕೊಟ್ಟ ಕೊನೆಯ ಟಾಸ್ಕ್ನಲ್ಲಿ ಧನರಾಜ್ ಕನ್ನಡಿಯನ್ನು ನೋಡಿ ಪಜಲ್ ಗೇಮ್ ಆಡಿದ್ದು ಬೆಳಕಿಗೆ ಬಂದಿದೆ. ಹೀಗಾಗಿ ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ ತಡೆ ಹಿಡಿದಿದ್ದರು.
ಈ ಬಗ್ಗೆ ಖುದ್ದು ಬಿಗ್ಬಾಸ್ ಮನೆಯವರ ಮುಂದೆ ಅಸಲಿ ಸತ್ಯವನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ. ಬಿಗ್ಬಾಸ್ ಮಾತನ್ನು ಕೇಳಿಸಿಕೊಂಡ ಧನರಾಜ್ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಬಿಗ್ಬಾಸ್ ನನ್ನಿಂದ ಅಷ್ಟು ದೊಡ್ಡ ತಪ್ಪಾಗಿದೆ ಅಂತ ಗೊತ್ತಾಲಿಲ್ಲ. ಆ ಗೆಲುವು ನನ್ನದು ಅಲ್ಲ ಅಂತ ಅನಿಸುತ್ತಿದೆ. ನನ್ನನ್ನೂ ನಾಮಿನೇಟ್ ಮಾಡಿಕೊಂಡೆ ಪ್ರಕ್ರಿಯೆ ಶುರು ಮಾಡಿ ಪ್ಲಿಸ್ ಅಂತ ಬೇಡಿಕೊಂಡಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ಬಿಗ್ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






