ಮಹಾ ಕುಂಭಮೇಳದಲ್ಲಿ ಇಂದು ದ್ರೌಪದಿ ಮುರ್ಮು ಪವಿತ್ರಸ್ನಾನ: ದೇಶದ ಒಳಿತಿಗೆ ವಿಶೇಷ ಪ್ರಾರ್ಥನೆ!

ಫೆಬ್ರವರಿ 10, 2025 - 16:18
 0  10
ಮಹಾ ಕುಂಭಮೇಳದಲ್ಲಿ ಇಂದು ದ್ರೌಪದಿ ಮುರ್ಮು ಪವಿತ್ರಸ್ನಾನ: ದೇಶದ ಒಳಿತಿಗೆ ವಿಶೇಷ ಪ್ರಾರ್ಥನೆ!

ಪ್ರಯಾಗ್ ರಾಜ್:- ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಧಾರ್ಮಿಕ ಸ್ನಾನಕ್ಕೂ ಮುನ್ನ, ಅವರು ಸಂಗಮದಲ್ಲಿ ಹೂವುಗಳು ಮತ್ತು ತೆಂಗಿನಕಾಯಿಯನ್ನು ಅರ್ಪಿಸಿದರು ಮತ್ತು ‘ಅರ್ಘ್ಯ’ ಮಾಡುವ ಮೂಲಕ ಭಗವಾನ್ ಸೂರ್ಯನಿಗೆ ನಮಸ್ಕರಿಸಿದರು.

ಪ್ರಯಾಗ್‌ರಾಜ್‌ಗೆ ಬಂದಿಳಿದ ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ರಾಷ್ಟ್ರಪತಿ ದ್ರೌಪದಿ ಮುರ್ಮು 8 ಗಂಟೆಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಮಯ ಕಳೆಯಲಿದ್ದು. ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow