ಮಹಾ ಕುಂಭಮೇಳದಲ್ಲಿ ಜನಸಾಗರ: 50 ಅಲ್ಲ 60 ಕೋಟಿ ಭಕ್ತಾದಿಗಳಿಂದ ಪುಣ್ಯಸ್ನಾನ!?

ಪ್ರಯಾಗ್ ರಾಜ್:- ಮಹಾಕುಂಭಮೇಳಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿದ್ದು, 50 ಅಲ್ಲ 60 ಕೋಟಿ ಭಕ್ತಾದಿಗಳಿಂದ ಪುಣ್ಯಸ್ನಾನ ಆಗುವ ನಿರೀಕ್ಷೆಯಿದೆ.
ಮಹಾಕುಂಭಮೇಳ ಮುಗಿಯುವ ಹೊತ್ತಿಗೆ ಭಕ್ತಾದಿಗಳ ಪುಣ್ಯಸ್ನಾನ ಮಾಡಿದ ಸಂಖ್ಯೆ 60 ಕೋಟಿಗೂ ದಾಟಬಹುದು ಎಂದು ಅಂದಾಜಿಸಲಾಗಿದೆ. ನಿನ್ನೆಯಷ್ಟೇ ಇದರ ಸಂಖ್ಯೆ 50 ಕೋಟಿ ಮೀರಬಹುದು ಎನ್ನಲಾಗಿತ್ತು. ಆದ್ರೆ ಈಗ ಹರಿದು ಬರುತ್ತಿರುವ ಭಕ್ತಸಾಗರ ನೋಡಿದರೆ ಇದು 60 ಕೋಟಿ ದಾಟಿದರು ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.
ಉತ್ತರಪ್ರದೇಶದ ಸರ್ಕಾರ ಸುಮಾರು 45 ಕೋಟಿ ಜನರಿಂದ ಪುಣ್ಯಸ್ನಾನ ಆಗಬಹುದು ಎಂಬ ನಿರೀಕ್ಷೆಯಲ್ಲಿ ತನ್ನ ತಯಾರಿ ಮಾಡಿತ್ತು. ಆ ನಿರೀಕ್ಷೆಯನ್ನು ಮೀರಿ ಭಕ್ತಾದಿಗಳು ಪುಣ್ಯಸ್ನಾನಕ್ಕೆ ಆಗಮಿಸುತ್ತಿದ್ದಾರೆ. ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿರುವುದರಿಂದ ಪ್ರಯಾಗರಾಜ್ನಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿದೆ. ಜನದಟ್ಟಣೆ ನಿಯಂತ್ರಣಕ್ಕೆ ಮಾಡಿಕೊಂಡ ಎಲ್ಲಾ ಪ್ಲ್ಯಾನ್ಗಳು ವಿಫಲಗೊಳ್ಳುತ್ತಿವೆ.
ಇಂದು ಕೂಡ ಕೋಟ್ಯಾಂತರ ಸಂಖ್ಯೆಯಲ್ಲಿ ಪ್ರಯಾಗರಾಜ್ಗೆ ಭಕ್ತರು ಹರಿದು ಬರುತ್ತಿದ್ದಾರೆ. ನಾಳೆ ಪವಿತ್ರ ಮಾಘಿ ಪೂರ್ಣಿಮೆಯಿರುವುದರಿಂದ ಕೋಟಿಗಟ್ಟಲೇ ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಯಾಗರಾಜ್ನತ್ತ ಮುಖ ಮಾಡಿದ್ದಾರೆ. ಜನದಟ್ಟಣೆ ನಿಯಂತ್ರಣಕ್ಕಾಗಿ ನೋ ವೆಹಿಕಲ್ ಝೋನ್ ಘೋಷಣೆ ಮಾಡಲಾಗಿದೆ. ಅಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇನ್ನು ಪ್ರಯಾಗರಾಜ್ಗೆ ಹರಿದು ಬರುವ ಭಕ್ತರ ಸಂಖ್ಯೆಯ ವಿಹಂಗಮ ನೋಟ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






