ಯಾವುದೇ ಕಾರಣಕ್ಕೂ ಬಿಡಬಾರದು, ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು: ಸಚಿವ ಸಂತೋಷ್ ಲಾಡ್

ಮೈಸೂರು: ಯಾವುದೇ ಕಾರಣಕ್ಕೂ ಬಿಡಬಾರದು, ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಶ್ಮೀರ ಘಟನೆಯನ ಬಗ್ಗೆ ಕೇಂದ್ರದ ಸರ್ವಪಕ್ಷಗಳ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ನಾವೆಲ್ಲ ಬದ್ಧರಾಗಬೇಕು.
ಪಾಕಿಸ್ತಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಸ್ವಾಗತ. ನನ್ನ ಅಭಿಪ್ರಾಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನುಗ್ಗಿ ಹೊಡೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಇದೇ ಹೇಳಿದ್ದೇನೆ" ಎಂದರು.
"ಯಾವುದೇ ಕಾರಣಕ್ಕೂ ಇವರನ್ನು ಬಿಡಬಾರದು, ಮನೆ ತೂರಿಯಾದರೂ ಸರಿ, ಪಾಕಿಸ್ತಾನದ ಒಳಗಡೆ ಹೋಗಿ ಹೊಡಿಬೇಕು ಎನ್ನುವಂತದ್ದು ನನ್ನ ಅಭಿಪ್ರಾಯ, ಎಲ್ಲರ ನಿರ್ಣಯ ಕೂಡ. ಈ ಹಿಂದೆ 1971ರ ದಶಕದಲ್ಲಿ ಶ್ರೀಮತಿ ಇಂದಿರಾ ಗಾಂಧಿ ಅವರು ಪಾಕಿಸ್ತಾನಿಯರನ್ನು ಮಂಡಿಯೂರಿ ಕೂರುವಂತೆ ಮಾಡಿದ್ದರು. ಈಗಲೂ ಹಾಗೇ ಮಾಡಬೇಕು" ಎಂದು ಸಚಿವರು ಉತ್ತರಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






