Actor Darshan Case: 10 ದಿನಗಳ ಬಳಿಕ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್!

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡಿ ಗ್ಯಾಂಗ್ ಜೈಲು ಪಾಲಾಗಿ ಮೂರು ತಿಂಗಳೇ ಕಳೆದು ಹೋಗಿದೆ. ತಿಂಗಳು ಕಳೆದಂತೆ ಒಬ್ಬೊಬ್ಬರಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ರು. ಇದೀಗ ಈ ಗ್ಯಾಂಗ್ ನ ಮೂವರಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಇಂದು ಮೂವರು ಜೈಲಿಂದ ಬಿಡುಗಡೆಯಾಗಿದ್ದಾರೆ.
ಆರೋಪಿಗಳಾದ ಕಾರ್ತಿಕ್ ಅಲಿಯಾಸ್ ಕಪ್ಪೆ, ನಿಖಿಲ್ ನಾಯಕ್ ಹಾಗೂ ಕೇಶವಮೂರ್ತಿಗೆ ಜಾಮೀನು ಸಿಕ್ಕಿದೆ. ಸೆ.23 ರಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕರೂ ಶ್ಯೂರಿಟಿ ಸಿಗದ ಹಿನ್ನೆಲೆ ಮೂವರು ಆರೋಪಿಗಳು ಕೂಡ ಜೈಲಿನಲ್ಲಿಯೇ ಇದ್ದರು. ಇದೀಗ ಶ್ಯೂರಿಟಿ ಸಿಕ್ಕಿದ್ದು, ಸೆಷನ್ ಕೋರ್ಟ್ ನಲ್ಲಿ ಶ್ಯೂರಿಟಿ ಸ್ವೀಕಾರವಾಗಿದೆ.
ಶ್ಯೂರಿಟಿ ಸಿಕ್ಕ ಹಿನ್ನೆಲೆ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳು ಜೈಲಿನಿಂದ ರಿಲೀಸ್ ಆಗಿದ್ದಾರೆ. ಇನ್ನೂ ಸಿಟಿ ಸಿವಿಲ್ ಕೋರ್ಟ್ನ 57ರ ನ್ಯಾಯಾಲಯಕ್ಕೆ ಮತ್ತೆ ಐವರು ಆರೋಪಿಗಳು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ರು.
ಆರೋಪಿಗಳಾದ ಪವನ್, ಅನು ಕುಮಾರ್, ರಾಘವೇಂದ್ರ, ಲಕ್ಷ್ಮಣ್ ಹಾಗೂ ನಾಗರಾಜ ಬೇಲ್ ಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕೊಲೆ ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆಗಿದ್ರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ.
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






