Actor Darshan Hospitalized: ದರ್ಶನ್ ಬೇಲ್ ವಿರುದ್ಧ ಮೇಲ್ಮನವಿ ಯಾವಾಗ? ಕಮಿಷನರ್ ಬಿ.ದಯಾನಂದ್‌ ಹೇಳಿದ್ದೇನು..?

ನವೆಂಬರ್ 19, 2024 - 18:45
 0  21
Actor Darshan Hospitalized: ದರ್ಶನ್ ಬೇಲ್ ವಿರುದ್ಧ ಮೇಲ್ಮನವಿ ಯಾವಾಗ? ಕಮಿಷನರ್ ಬಿ.ದಯಾನಂದ್‌ ಹೇಳಿದ್ದೇನು..?

ಬೆಂಗಳೂರು: ದರ್ಶನ್ ಮಧ್ಯಂತರ ಜಾಮೀನು ರದ್ಧತಿಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಅಧಿಕಾರಿಗಳ ವಕೀಲರು ಸಿದ್ಧತೆ ನಡೆಸಿದ್ದಾರೆ. ಹಿರಿಯ ವಕೀಲ ರಘುಪತಿ ಅವರಿಂದ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ. ನವೆಂಬರ್ 13ರಂದು SLP ಸಲ್ಲಿಕೆಗೆ ಅನುಮತಿ ಸಿಕ್ಕಿದೆ. ಗೃಹ ಇಲಾಖೆಯಿಂದ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಲು ಅನುಮತಿ ಸಿಕ್ಕಿದೆ. ಇದಕ್ಕೆ ಬೇಕಾದ ಅಗತ್ಯ ದಾಖಲಾತಿ, ವಿಷಯ, ಭಾಷಾಂತರ ಸಿದ್ಧತೆಯನ್ನು ತನಿಖಾಧಿಕಾರಿಗಳು ಮಾಡಿಕೊಂಡಿದ್ದಾರೆ.

ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್‌ ಅವರು ಮಾಹಿತಿ ನೀಡಿದ್ದಾರೆ. ದರ್ಶನ್‌ ಕೇಸ್‌ನಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಗತ್ಯ ದಾಖಲೆ, ಕಾಗದ ಪತ್ರಗಳನ್ನು ಸಿದ್ಧಪಡೆಸಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಚಾರ್ಜ್‌ಶೀಟ್‌ ಅನ್ನು ಭಾಷಾಂತರ ಮಾಡುವ ಕೆಲಸ ನಡೆದಿದೆ. ಶೀಘ್ರದಲ್ಲಿಯೇ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow