BBK11: ಇಂದು ಕಿಚ್ಚನ ಮೊದಲ ಪಂಚಾಯತಿ: ಲಾಯರ್ ಜಗದೀಶ್ ಗಿದೆ ಕ್ಲಾಸ್!?

ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ಕಿಚ್ಚನ ಪಂಚಾಯಿತಿ ಇಂದು ನಡೆಯಲಿದೆ. ಸೂಪರ್ ಸಟರ್ಡೆ ವಿಥ್ ಸುದೀಪ್ ಎಪಿಸೋಡ್ಗೆ ಕರ್ನಾಟಕದ ಜನತೆ ಕಾದು ಕುಳಿತಿದ್ದು, ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿದೆ. ಮೊದಲ ವಾರ ಬಿಗ್ ಬಾಸ್ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಅದರಲ್ಲೂ ಲಾಯರ್ ಜಗದೀಶ್ ಆಡಿದ ಮಾತುಗಳು ಅನೇಕ ಸ್ಪರ್ಧಿಗಳಿಗೆ ನೋವು ತರಿಸಿದ್ದು ಈ ಕುರಿತು ಕಿಚ್ಚ ಏನು ಹೇಳುತ್ತಾರೆ ನೋಡಬೇಕಿದೆ.
ನರಕ ಮತ್ತು ಸ್ವರ್ಗ' ಎಂಬ ಕಾನ್ಸೆಪ್ಟ್ ಮೂಲಕ ಶುಭಾರಂಭ ಮಾಡಿರುವ ಕಾರ್ಯಕ್ರಮದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ವಾದ - ವಾಗ್ವಾದಗಳು ಜರುಗಿವೆ. ಕಳೆದ ವಾರಾಂತ್ಯ ನಗುಮೊಗದಲ್ಲಿ ಮನೆಯೊಳಗೆ ಬಲಿಗಾಲಿಟ್ಟಿರುವ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ಇದೀಗ ಎಲಿಮಿನೇಶನ್ಗೆ ಕ್ಷಣಗಣನೆ ಶುರುವಾಗಿದೆ.
ಎಲಿಮಿನೇಶನ್ಗೆ ನಾಮಿನೇಟ್ ಆದವರು?
ಗೌತಮಿ ಜಾದವ್
ಶಿಶಿರ್ ಶಾಸ್ತ್ರೀ
ಯಮುನಾ ಶ್ರೀನಿಧಿ
ಹಂಸಾ
ಭವ್ಯಾ ಗೌಡ
ಲಾಯರ್ ಜಗದೀಶ್
ಮಾನಸಾ
ಮೋಕ್ಷಿತಾ ಪೈ
ಚೈತ್ರಾ ಕುಂದಾಪುರ
ಹಂಸಾ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ, ಎಲಿಮಿನೇಶನ್ನಿಂದ ಪಾರಾಗಿದ್ದಾರೆ. ಉಳಿದವರ ಮೇಲೆ ಎಲಿಮಿನೇಶನ್ ತೂಗುಗತ್ತಿಯಿದೆ.
ಹೈ-ಡ್ರಾಮಾ ತುಂಬಿದ ಮೊದಲ ವಾರಕ್ಕೆ ಕಿಚ್ಚನ ಮೊದಲ ಪಂಚಾಯ್ತಿ. ವಾರದ ಕತೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ'' ಎಂಬ ಕ್ಯಾಪ್ಷನ್ನೊಂದಿಗೆ ಇಂದು ಪ್ರೋಮೋ ಒಂದನ್ನು ಅನಾವರಣಗೊಳಿಸಿದ್ದು, ಯಾರು ಎಲಿಮಿನೇಶನ್ ಆಗಬಹುದೆಂಬ ಕುತೂಹಲ ಮೂಡಿದೆ.
ಇಂದಿನ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಪರ್ಧಿಗಳ ಜೊತೆಗಿನ ಜಗಳ ಒಂದುಕಡೆಯಾದರೆ ಮತ್ತೊಂದೆಡೆ ಇವರು ಬಿಗ್ ಬಾಸ್ಗೆನೇ ಧಮ್ಕಿ ಹಾಕಿದ್ದರು. ‘ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರಿ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ನಾಲಿಗೆ ಹರಿಬಿಟ್ಟಿದ್ದರು. ಮುಂದಿನ ದಿನ ಈ ಮಾತಿಗೆ ಕ್ಷಮೆ ಕೇಳಿದ್ದರೂ ಸುದೀಪ್ ಈ ವಿಚಾರವನ್ನು ಎತ್ತುವುದು ಖಚಿತ.
ಹಾಗೆಯೆ ಹೆಣ್ಣು ಮಕ್ಕಳ ವಿಚಾರಕ್ಕೆ ಹೋದರೆ ಕಿಚ್ಚ ಸುದೀಪ್ ಸುಮ್ನೆ ಬಿಡೋದಿಲ್ಲ. ಲಾಯರ್ ಜಗದೀಶ್ ಅವರು ಮಾನಸಾ ಅವರಿಗೆ ‘ಯಾವ ಸೀಮೆ ಹೆಂಗಸು ಅವಳು’ ಎಂದು ಹೇಳಿದ್ದರು. ಅಲ್ಲದೆ ಏಕವಚನದಲ್ಲಿ ಮಾತನಾಡಿದ್ದರು. ಇದರ ಬಗ್ಗೆ ಇಂದಿನ ಎಪಿಸೋಡ್ನಲ್ಲಿ ದೊಡ್ಡ ಡಿಸ್ಕಷನ್ ಆಗುವುದು ಖಚಿತ. ಅತ್ತ ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯ ನಡುವೆ ಪ್ರೀತಿ ಹುಟ್ಟಿದಂತಿದೆ. ಇವರನ್ನು ಕಿಚ್ಚ ಕೂಡ ಕಾಲೆಳಯಬಹುದು
ನಿಮ್ಮ ಪ್ರತಿಕ್ರಿಯೆ ಏನು?






