Bigg Boss Kannada: ಮನೆಯಿಂದ ಹೊರನಡೆದಾ ತ್ರಿವಿಕ್ರಮ್..! ಕಣ್ಣೀರಿಟ್ಟ ಭವ್ಯಾ - ಅಸಲಿಗೆ ಆಗಿದ್ದೇನು..?

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ದಿನಕ್ಕೆ ಒಂದಿಲ್ಲೊಂದು ಟ್ವಿಸ್ಟ್ ಕೊಡುತ್ತಾ ವೀಕ್ಷಕರಿಗೆ ಬಹಳ ಮನರಂಜನೆ ಕೊಡುತ್ತಿದೆ. ಇನ್ನೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಎಲಿಮಿನೇಟ್ ಆಗಿದ್ದಾಗಿ ತೋರಿಸಲಾಯಿತು.
ಆದರೆ, ಈ ವಾರ ಯಾವುದೇ ವೋಟಿಂಗ್ ಇರಲಿಲ್ಲ. ಈ ಬಗ್ಗೆ ವೀಕ್ಷಕರಿಗೆ ಸ್ಪಷ್ಟನೆ ಇದೆ. ಆದರೆ, ದೊಡ್ಮನೆ ಮಂದಿಗೆ ಈ ವಿಚಾರ ಗೊತ್ತಿಲ್ಲ. ಆದರೆ, ಅಚ್ಚರಿ ಎಂಬಂತೆ ಈ ವಾರ ತ್ರಿವಿಕ್ರಮ್ ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಬಂದಿದ್ದಾರೆ.
ಈ ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆ ಕೂಡ ನೀಡಿದ್ದರು. ಆದರೆ, ತ್ರಿವಿಕ್ರಂ ಅವರಿಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.
ತ್ರಿವಿಕ್ರಮ್ ಆಚೆ ಹೋಗುತ್ತಿದ್ದಂತೆ, ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ ಅದರಲ್ಲೂ ಭವ್ಯಾ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಗ್ಬಾಸ್ ಪ್ಲಿಸ್ ವಾಪಸ್ ಕಳುಹಿಸಿ ಅಂತ ಕಣ್ಣೀರು ಹಾಕಿದ್ದಾರೆ. ಆದ್ರೆ, ಮನೆ ಮಂದಿ ಏನಾದ್ರೂ ಟ್ವಿಸ್ಟ್ ಇರಬಹುದು ಅಂತ ಅಂದುಕೊಂಡಿದ್ದರು. ಅವರೆಲ್ಲಾ ಮತ್ತೆ ತ್ರಿವಿಕ್ರಮ್ ಆಚೆ ಬಂದೆ ಬರುತ್ತಾರೆ ಅಂತ ಕಾಯುತ್ತಿದ್ದರು.
ಆದ್ರೆ ತ್ರಿವಿಕ್ರಮ್ ಬಂದಿಲ್ಲ. ಆದರೆ ಹಿಂದಿನ ಸಂಚಿಕೆಯ ಕೊನೆಯಲ್ಲಿ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿರಲಿಲ್ಲ. ಹೀಗಾಗಿ ತ್ರಿವಿಕ್ರಮ್ ಅವರನ್ನು ಸೀಕ್ರೆಟ್ ರೂಂಗೆ ಕಳಿಸಿರಬಹುದು. ಮುಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್ ಮತ್ತೆ ಬಿಗ್ಬಾಸ್ ಮನೆಗೆ ವಾಪಸ್ ಬರುತ್ತಾರಾ ಎಂದು ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






