Bigg Boss Kannada: ಮನೆಯಿಂದ ಹೊರನಡೆದಾ ತ್ರಿವಿಕ್ರಮ್‌‌..! ಕಣ್ಣೀರಿಟ್ಟ ಭವ್ಯಾ - ಅಸಲಿಗೆ ಆಗಿದ್ದೇನು..?

ಡಿಸೆಂಬರ್ 23, 2024 - 12:01
 0  28
Bigg Boss Kannada: ಮನೆಯಿಂದ ಹೊರನಡೆದಾ ತ್ರಿವಿಕ್ರಮ್‌‌..! ಕಣ್ಣೀರಿಟ್ಟ ಭವ್ಯಾ - ಅಸಲಿಗೆ ಆಗಿದ್ದೇನು..?

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ದಿನಕ್ಕೆ ಒಂದಿಲ್ಲೊಂದು ಟ್ವಿಸ್ಟ್ ಕೊಡುತ್ತಾ ವೀಕ್ಷಕರಿಗೆ ಬಹಳ ಮನರಂಜನೆ ಕೊಡುತ್ತಿದೆ. ಇನ್ನೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಎಲಿಮಿನೇಟ್ ಆಗಿದ್ದಾಗಿ ತೋರಿಸಲಾಯಿತು.

ಆದರೆ, ಈ ವಾರ ಯಾವುದೇ ವೋಟಿಂಗ್ ಇರಲಿಲ್ಲ. ಈ ಬಗ್ಗೆ ವೀಕ್ಷಕರಿಗೆ ಸ್ಪಷ್ಟನೆ ಇದೆ. ಆದರೆ, ದೊಡ್ಮನೆ ಮಂದಿಗೆ ಈ ವಿಚಾರ ಗೊತ್ತಿಲ್ಲ. ಆದರೆ, ಅಚ್ಚರಿ ಎಂಬಂತೆ ಈ ವಾರ ತ್ರಿವಿಕ್ರಮ್​ ಬಿಗ್​ಬಾಸ್​ ಮುಖ್ಯ ದ್ವಾರದಿಂದ ಆಚೆ ಬಂದಿದ್ದಾರೆ.

ಈ ವಾರ ತ್ರಿವಿಕ್ರಂ ಅವರನ್ನು ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದರು. ತಮ್ಮ ತಂಡದವರನ್ನು ಉಳಿಸಲು ಹೋಗಿ ಅವರು ಈ ರೀತಿ ಮಾಡಿದ್ದರು. ಈ ಬಗ್ಗೆ ಸುದೀಪ್ ಅವರು ಎಚ್ಚರಿಕೆ ಕೂಡ ನೀಡಿದ್ದರು. ಆದರೆ, ತ್ರಿವಿಕ್ರಂ ಅವರಿಗೆ ತಾವು ಇದ್ದೇ ಇರುತ್ತೇವೆ ಎನ್ನುವ ಓವರ್​ಕಾನ್ಫಿಡೆನ್ಸ್ ಇತ್ತು. ಅದನ್ನು ಬ್ರೇಕ್ ಮಾಡಬೇಕು ಎನ್ನುವ ಕಾರಣಕ್ಕೆ ಈ ವಾರ ಎಲಿಮಿನೇಷನ್ ಡ್ರಾಮಾ ಮಾಡಲಾಗಿದೆ.

ತ್ರಿವಿಕ್ರಮ್​ ಆಚೆ ಹೋಗುತ್ತಿದ್ದಂತೆ, ಮನೆ ಮಂದಿ ಫುಲ್ ಶಾಕ್​ ಆಗಿದ್ದಾರೆ ಅದರಲ್ಲೂ ಭವ್ಯಾ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಗ್​ಬಾಸ್​ ಪ್ಲಿಸ್​ ವಾಪಸ್​ ಕಳುಹಿಸಿ ಅಂತ ಕಣ್ಣೀರು ಹಾಕಿದ್ದಾರೆ. ಆದ್ರೆ, ಮನೆ ಮಂದಿ ಏನಾದ್ರೂ ಟ್ವಿಸ್ಟ್​ ಇರಬಹುದು ಅಂತ ಅಂದುಕೊಂಡಿದ್ದರು. ಅವರೆಲ್ಲಾ ಮತ್ತೆ ತ್ರಿವಿಕ್ರಮ್​ ಆಚೆ ಬಂದೆ ಬರುತ್ತಾರೆ ಅಂತ ಕಾಯುತ್ತಿದ್ದರು.

 ಆದ್ರೆ ತ್ರಿವಿಕ್ರಮ್​ ಬಂದಿಲ್ಲ. ಆದರೆ ಹಿಂದಿನ ಸಂಚಿಕೆಯ ಕೊನೆಯಲ್ಲಿ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿರಲಿಲ್ಲ. ಹೀಗಾಗಿ ತ್ರಿವಿಕ್ರಮ್​ ಅವರನ್ನು ಸೀಕ್ರೆಟ್ ರೂಂಗೆ ಕಳಿಸಿರಬಹುದು. ಮುಂದಿನ ಸಂಚಿಕೆಯಲ್ಲಿ ತ್ರಿವಿಕ್ರಮ್​ ಮತ್ತೆ ಬಿಗ್​ಬಾಸ್​ ಮನೆಗೆ ವಾಪಸ್​ ಬರುತ್ತಾರಾ ಎಂದು ಕಾದು ನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow