Darshan: ಮೈಸೂರು ಫಾರ್ಮ್ ಹೌಸ್ʼನಲ್ಲಿಯೇ “ಕಾಟೇರ”ನ ಸಂಕ್ರಾಂತಿ ಹಬ್ಬ!

ಜನವರಿ 14, 2025 - 14:05
 0  10
Darshan: ಮೈಸೂರು ಫಾರ್ಮ್ ಹೌಸ್ʼನಲ್ಲಿಯೇ “ಕಾಟೇರ”ನ ಸಂಕ್ರಾಂತಿ ಹಬ್ಬ!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಮೈಸೂರಿಗೆ ಹೋಗುತ್ತೇನೆ. ಅಮ್ಮನ ಜೊತೆಗೆ ಇರುತ್ತೇನೆ. ಹಾಗಾಗಿ ಐದು ದಿನ ಮೈಸೂರಿಗೆ ಹೋಗಲು ಅನುಮತಿ ಕೊಡಿ ಅಂತಲೇ ಕೇಳಿಕೊಂಡಿದ್ದರು. ಆ ಒಂದು ಮನವಿಗೆ ನ್ಯಾಯಾಲಯ ಸ್ಪಂಧಿಸಿದೆ. ಜನವರಿ 12 ರಿಂದ ಐದು ದಿನ ಮೈಸೂರಿನಲ್ಲಿ ಇರಲು ಅನುಮತಿ ಕೊಟ್ಟಿದೆ.

ಹಾಗಾಗಿಯೇ ದರ್ಶನ್ ಸಂಕ್ರಾಂತಿ ಹಬ್ಬ ಜೋರು ಅನ್ನೋ ಮಾತು ಇದೆ. ಮೈಸೂರಿನ ಫಾರ್ಮ್‌ ಹೌಸ್ ಅಲ್ಲಿಯೇ ಸಂಕ್ರಾತಿ ಹಬ್ಬ ಆಚರಿಸಿದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರುಗಳು ಫಾರಂ ಹೌಸ್​ನಲ್ಲಿ ಪ್ರಾಣಿಗಳನ್ನು ಆರೈಕೆ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ.

ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರೂ ಸಹ ಚಿತ್ರದಲ್ಲಿ ಮುಖ ತೋರಿಸಿಲ್ಲ. ವಿಜಯಲಕ್ಷ್ಮಿ ತಮ್ಮ ಮುದ್ದಿನ ನಾಯಿಯನ್ನು ಫಾರಂ ಹೌಸ್​ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ಪತಿಯೊಂದಿಗೆ ಹಬ್ಬ ಆಚರಿಸುತ್ತಿದ್ದಾರೆ. ಪುತ್ರ ಸಹ ಫಾರಂ ಹೌಸ್​ನಲ್ಲಿಯೇ ಇದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow