Nikhil Kumaraswamy; ಹಲಾಲ್, ಹಿಜಾಬ್ ಪರ ಧ್ವನಿ ಎತ್ತಿದ್ದು HDK: ನಿಖಿಲ್ ಕುಮಾರಸ್ವಾಮಿ

ಡಿಸೆಂಬರ್ 9, 2024 - 22:01
 0  20
Nikhil Kumaraswamy; ಹಲಾಲ್, ಹಿಜಾಬ್ ಪರ ಧ್ವನಿ ಎತ್ತಿದ್ದು HDK: ನಿಖಿಲ್ ಕುಮಾರಸ್ವಾಮಿ

 ನವದೆಹಲಿ: ಹಲಾಲ್, ಹಿಜಾಬ್ ಪರ ಧ್ವನಿ ಎತ್ತಿದ್ದು ಕುಮಾರಸ್ವಾಮಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ  ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಸ್ಪರ್ಧಿಸಿ 87,000 ಮತಗಳನ್ನು ಪಡೆದು ಸೋಲನ್ನಪ್ಪಿದ್ದೇನೆ. ನಮಗೆ ಜಯ ಸಿಕ್ಕಿರದೇ ಇರಬಹುದು, ಫಲ ಸಿಕ್ಕಿದೆ.

ಜನರ ತೆರಿಗೆಯ ದುಡ್ಡನ್ನು ಚುನಾವಣಾ ಮುನ್ನಾ ದಿನ ಗೃಹಲಕ್ಷ್ಮಿ ಯೋಜನೆ ಮೂಲಕ ನೀಡಲಾಯಿತು. ಇದರ ಜೊತೆಗೆ ಒಂದು ಸಮುದಾಯ ನಮ್ಮನ್ನು ಕೈಬಿಟ್ಟಿತು. ಗಣೇಶ ವಿಸರ್ಜನೆ ಪ್ರಕರಣ ನಡೆದಾಗ ಎರಡು ಸಮುದಾಯದ ನಡುವೆ ಘರ್ಷಣೆಯಾಯಿತು.

ಆಗ ಆಸ್ತಿ ಹಾನಿಯಾದವರಿಗೆ ಸಮುದಾಯ ಕೇಳದೆ ಹೆಚ್‌ಡಿ ಕುಮಾರಸ್ವಾಮಿ ಸಹಾಯ ಮಾಡಿದರು. ಮುಸ್ಲಿಮರಿಗೆ ಸಾಂತ್ವನ ಹೇಳಿ ನೆರವು ನೀಡಿದರು. ಹಲಾಲ್, ಹಿಜಾಬ್ ಪರ ಧ್ವನಿ ಎತ್ತಿದ್ದು ಕುಮಾರಸ್ವಾಮಿ. ಅದಾಗ್ಯೂ ನಮ್ಮನ್ನು ಬಿಟ್ಟು ಕಾಂಗ್ರೆಸ್ ಆಯ್ಕೆ ಮಾಡಿದ್ದಾರೆ. ಅದು ಅವರ ನಿರ್ಧಾರ. ನಾವು ಪ್ರಶ್ನೆ ಮಾಡುವುದಿಲ್ಲ ಎಂದರು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow