Virender Sehwag: ಸ್ಟಾರ್ ಕ್ರಿಕೆಟಿಗನ ಸಂಸಾರದಲ್ಲಿ ಡಿವೋರ್ಸ್ ಬಿರುಗಾಳಿ! 20 ವರ್ಷಗಳ ನಂತರ ಸೆಹ್ವಾಗ್ ಮತ್ತು ಆರತಿ ಬೇರೆ ಬೇರೆ..!

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರ ದಾಂಪತ್ಯ ಜೀವನದಲ್ಲಿ ಬಿರುಕು ಎನ್ನುವ ಸುದ್ದಿಗಳು ಸಾಕಷ್ಟು ಕೇಳಿಬರುತ್ತಿವೆ. ಕೆಲವು ಈಗಾಗಲೇ ವಿಚ್ಛೇದನದಲ್ಲಿ ಅಂತ್ಯವಾಗಿದೆ. ಇದೀಗ ಮತ್ತೊಬ್ಬ ಭಾರತೀಯ ಕ್ರಿಕೆಟಿಗನ ಜೀವನದಲ್ಲಿ ಬಿರುಗಾಳಿ ಎಬ್ಬಿದ್ದು, ಶೀಘ್ರದಲ್ಲೇ ಬೇರೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳು ಮತ್ತು ವದಂತಿಗಳು ಇನ್ನೂ ನಡೆಯುತ್ತಿವೆ. ಈ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎಂದು ಮಾಧ್ಯಮಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಒಂದು ವಿಭಾಗವು ಚಹಾಲ್ ಅವರನ್ನು ಟ್ರೋಲ್ ಮಾಡುತ್ತಿದೆ. ಇನ್ನೂ ಅನೇಕ ಬಳಕೆದಾರರು ಧನಶ್ರೀ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.
ಇದೀಗ 20 ವರ್ಷಗಳ ಸುದೀರ್ಘ ದಾಂಪತ್ಯದ ಬಳಿಕ ಸೇಹ್ವಾಗ್ ತಮ್ಮ ಪತ್ನಿ ಆರತಿ ಅಹ್ಲಾವತ್ಗೆ ವಿಚ್ಛೇದನ ನೀಡುವ ಸಾಧ್ಯತೆ ಇದೆ. ಹೌದು ಕೆಲವೇ ದಿನಗಳಲ್ಲಿ ಈಗ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ದಂಪತಿ ಬೇರಾಗುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಅನ್ ಫಾಲೋ ಮಾಡಿರುವ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆಂದು ವದಂತಿ ಹಬ್ಬಿದೆ. ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಆಗಲಿ ಆರತಿ ಅವರಾಗಲಿ ಸ್ಪಷ್ಟೀಕರಣ ನೀಡಿಲಲ. ಆಧರೆ ಕೆಲ ಸಮಯದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಆದರೂ ಈ ಸುದ್ದಿಯನ್ನು ಮಾತ್ರ ಯಾರಿಗೂ ನಂಬಲಾಗುತ್ತಿಲ್ಲ. ಯಾಕೆಂದರೆ ಇವರಿಬ್ಬರದ್ದೂ ಬಾಲ್ಯದ ಪ್ರೀತಿ. 20 ವರ್ಷದ ದಾಂಪತ್ಯ ಅಷ್ಟು ಸುಲಭದಲ್ಲಿ ಕೊನೆಗೊಳ್ಳುವಂಥದ್ದಲ್ಲ. ಅದಕ್ಕೇ ಎಲ್ಲರಿಗೂ ಈಗ ಅಚ್ಚರಿಯಾಗಿದೆ. ಜೊತೆಗೆ ಈ ಸುದ್ದಿ ಸುಳ್ಳಾಗಿರಲಿ ಎಂದೇ ಭಾವಿಸುತ್ತಿದ್ದಾರೆ.
ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಮತ್ತು ಆರತಿ ಅಹ್ಲಾವತ್ 2004ರಲ್ಲಿ ವಿವಾಹವಾಗಿದ್ದರೂ ಅವರದ್ದು ಬಾಲ್ಯದ ಪ್ರೇಮ. ಮೊದಲ ಬಾರಿ ಅವರಿಬ್ಬರೂ ಭೇಟಿಯಾದಾಗ ಸೆಹ್ವಾಗ್ ಗೆ ಏಳು ವರ್ಷ ಮತ್ತು ಆರತಿಗೆ ಕೇವಲ 5 ವರ್ಷವಷ್ಟೇ. 14 ವರ್ಷಗಳ ನಿರಂತರ ಸ್ನೇಹದ ಬಳಿಕ ಸೆಹ್ವಾಗ್ ಅವರು ತಮ್ಮ 21ನೇ ವಯಸ್ಸಿನಲ್ಲಿ ಆರತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು.
ಮನೆಯಲ್ಲಿ ವಿರೋಧವಿದ್ದರೂ ವಿವಾಹವಾದರು. ದಂಪತಿಗೆ 17 ವರ್ಷದ ಆರ್ಯವೀರ್ ಮತ್ತು 14 ವರ್ಷದ ವೇದಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸೆಹ್ವಾಗ್ ಮತ್ತು ಆರತಿ ಪ್ರೀತಿಸಿ ಮದುವೆಯಾಗಿದ್ದರು. ಆರತಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಆದರೆ, ಇದೀಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವರದಿಗಳು ಓಡಾಡುತ್ತಿವೆ.
ನಿಮ್ಮ ಪ್ರತಿಕ್ರಿಯೆ ಏನು?






