ʼಬಿಗ್ಬಾಸ್ʼ11ಕ್ಕೆ ಲಾಯರ್ ಎಂಟ್ರಿ! ವೋಟಿಂಗ್ ಪ್ರಕಾರ ಲಾಯರ್ ಜಗದೀಶ್ ಅವರು ಸ್ವರ್ಗಕ್ಕಾ? ನರಕಕ್ಕಾ?

ಕನ್ನಡ ಬಿಗ್ಬಾಸ್ ಸೀಸನ್ 11ಕ್ಕೆ ಕ್ಷಣಗಣನೆ ಶುರುವಾಗಿದ್ದು, ಈ ಬಾರಿಯ ಸೀಸನ್ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಮಾಡಲಾಗಿದ್ದು, ವೀಕ್ಷಕರು ಸ್ಪರ್ಧಿ ಯಾವ ಮನೆಗೆ ಹೋಗಬೇಕು ಎಂಬುದನ್ನು ವೋಟ್ ಮೂಲಕ ಹೇಳಬೇಕು. ವೋಟ್ ಆಧಾರದ ಮೇಲೆ ಸ್ಪರ್ಧಿಗಳು ಸ್ವರ್ಗ ಅಥವಾ ನರಕದಲ್ಲಿ ಇರುತ್ತಾರೆ ಎಂಬುವುದು ನಿರ್ಧಾರವಾಗುತ್ತದೆ.
ಇನ್ನೂ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆ ಪ್ರವೇಶ ಮಾಡಿರುವ ವಕೀಲ ಕೆನ್ ಜಗದೀಶ್ ಅವರು ಸಾಕಷ್ಟು ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ನಿತ್ಯವೂ ಲೈವ್ ಬರುವ ಅವರು ಒಂದಲ್ಲ ಒಂದು ವಿಚಾರಗಳ ಬಗ್ಗೆ ಮಾತನಾಡುತ್ತಾರೆ,
ಕೆಎನ್ ಜಗದೀಶ್ ಎರಡು ದಶಕಗಳ ಹಿಂದೆ ಬರೀ ಕಾಮನ್ ಮ್ಯಾನ್ ಆಗಿದ್ದವು. ನಂತರದಲ್ಲಿ ಬೆಂಗಳೂರಿನಲ್ಲಿ ಆರ್ಟಿಐ ಕಾರ್ಯಕರ್ತನಾಗಿ ಹೆಸರು ಮಾಡಿದ್ದ ಇವರೀಗ ಕಪ್ಪು ಕೋಟ್ ತೊಟ್ಟು ಪೊಲೀಸ್ ಇಲಾಖೆಯ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಇತ್ತೀಚೆಗೆ, ಕರ್ನಾಟಕದ ಮಾಜಿ ಸಿಎಂ ಒಬ್ಬರ ಸೆಕ್ಸ್ ವಿಡಿಯೋ ಇದೆ ಎಂದು ಹೇಳುವ ಮೂಲಕ ದೊಡ್ಡ ಸುದ್ದಿ ಮಾಡಿದ್ದರು. ಅದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ, ಸಂತ್ರಸ್ತ ಯುವತಿಯ ಪರವಾಗಿ ನಿಂತು ವಾದ ಮಾಡುವುದಾಗಿ ಹೇಳುವ ಮೂಲಕ ಸುದ್ದಿ ಮಾಡಿದ್ದರು.
ಸದ್ಯದ ಲೆಕ್ಕಾಚಾರದ ಪ್ರಕಾರ ಬಿಗ್ ಬಾಸ್ ಸೀಸನ್ 11ರಲ್ಲಿ ಕೆಲವರಿಗೆ ಸ್ವರ್ಗದ ಬಾಗಿಲು ತೆರೆದಿದೆ. ಇನ್ನೂ ಕೆಲವರಿಗೆ ನರಕದ ಶಿಕ್ಷೆ ಕಾದು ಕುಳಿತಿದೆ. ಹಾಗಿದ್ರೆ ಯಾರ್ ಯಾರು ಸ್ವರ್ಗ, ನರಕಕ್ಕೆ ಎಂಟ್ರಿ ಕೊಡಬಹುದು
ನರಕಕ್ಕೆ ಹೋಗುವವರು ಯಾರು?
ಶಿಶಿರ ಶಾಸ್ತ್ರಿ, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ರಂಜಿತ್ ಗೌಡ, ಅನುಷಾ ರೈ, ಮಾನಸ ತುಕಾಲಿ.
ಬಿಗ್ ಬಾಸ್ ಸ್ವರ್ಗದ ಸ್ಪರ್ಧಿಗಳು?
ಧರ್ಮ ಕೀರ್ತಿ ರಾಜ್, ಗೌತಮಿ ಜಾಧವ್, ಯಮುನಾ ಶ್ರೀನಿಧಿ, ಭವ್ಯಾ ಗೌಡ, ಲಾಯರ್ ಜಗದೀಶ್, ಉಗ್ರಂ ಮಂಜು, ಐಶ್ವರ್ಯ ಶಿಂದೋಗಿ, ಧನರಾಜ್, ಹಂಸ ನಾರಾಯಣಸ್ವಾಮಿ, ತ್ರಿವಿಕ್ರಮ್.
ಶನಿವಾರ ಪ್ರಸಾರವಾದ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿಯೇ ಗೌತಮಿ ಸೇರಿದಂತೆ ಕೆಲವರು ಹೆಸರು ಪ್ರಕಟವಾಗಿತ್ತು. ಇದೀಗ ವಾಹಿನಿ ಸ್ಪರ್ಧಿಯ ಪ್ರೋಮೋ ಬಿಡುಗಡೆ ಮಾಡಿದೆ. ಶನಿವಾರ ಬಿಗ್ಬಾಸ್ ಮನೆಯ ಮೇಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿತ್ತು. ಇಂದು ಸಂಜೆ 6 ಗಂಟೆಯಿಂದ ಬಿಗ್ಬಾಸ್ ಗ್ರಾಂಡ್ ಒಪನಿಂಗ್ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






