ಕರ್ನಾಟಕದಲ್ಲಿ ಸರ್ಕಾರಿ ಹುದ್ದೆ ಖಾಲಿ-ಖಾಲಿ: ಸೇವೆಗಳಲ್ಲಿ ವಿಳಂಬ! ಹೀಗಾದ್ರೆ ಹೇಗೆ?

ನಮ್ಮ ಯುವಕರು ಒಳ್ಳೆಯ ಎಜುಕೇಶನ್ ಪಡೆದಿದ್ದರೂ ಸರ್ಕಾರಿ ಕೆಲಸ ಸಿಗುತ್ತಿಲ್ಲ ಎಂದು ಬೇಸರ ಹೊರ ಹಾಕುತ್ತಾರೆ. ಅಷ್ಟೇ ಯಾಕೆ ಸರ್ಕಾರಿ ಕೆಲಸ ಸಿಗೋದು ತುಂಬಾ ಕಷ್ಟ ಅಂತಾಲೂ ಹೇಳುತ್ತಾರೆ. ಆದರೆ ಸರ್ಕಾರದಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಮರ್ರೆ. ಇವುಗಳನ್ನು ಭರ್ತಿ ಮಾಡುವ ಗೋಜಿಗೂ ಸರ್ಕಾರ ಹೋಗುತ್ತಿಲ್ಲ.
ಎಸ್, ಕರ್ನಾಟಕದಲ್ಲಿ 20 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ-ಖಾಲಿ ಆಗಿದ್ದು, ಸೇವೆಗಳಿಗೆ ಭಾರೀ ಹೊಡೆತ ಕೊಟ್ಟಿದೆ.
ರಾಜ್ಯದಲ್ಲಿ 7.72 ಲಕ್ಷ ಸರ್ಕಾರಿ ಉದ್ಯೋಗಗಳು ಮಂಜೂರಾಗಿವೆ, ಅವುಗಳಲ್ಲಿ 2.76 ಲಕ್ಷ ಉದ್ಯೋಗಗಳು ಖಾಲಿ ಇವೆ. ಕಳೆದ ವರ್ಷ ಇದ್ದ ಖಾಲಿ ಹುದ್ದೆಗಳ ಸಂಖ್ಯೆ 2.55 ಲಕ್ಷ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇದೀಗ ಹೆಚ್ಚುವರಿಯಾಗಿ 20 ಸಾವಿರಕ್ಕೂ ಅದಿಕ ಹುದ್ದೆಗಳು ಸೇರ್ಪಡೆಗೊಂಡಿವೆ. ಕಾಂಗ್ರೆಸ್ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಒಂದು ವರ್ಷದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಈಗ ಒಂದು ವರ್ಷ 7 ತಿಂಗಳು ಕಳೆದಿದೆ.
ಹಣಕಾಸು ಇಲಾಖೆಯ ಪ್ರಕಾರ, ಕೇಸ್ ಟು ಕೇಸ್ ಆಧಾರದ ಮೇಲೆ ನೇಮಕಾತಿಗೆ ಅನುಮತಿ ನೀಡಲಾಗುತ್ತದೆ. ಆದರೆ ಸ್ಪಷ್ಟವಾಗಿ ಸಿದ್ದರಾಮಯ್ಯ ಆಡಳಿತವು ಖಾತರಿ ಯೋಜನೆಗಳಿಗೆ 63,000 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಿದೆ. ಹಾಗಅಗಿ ನೇಮಕಾತಿಯಲ್ಲಿ ನಿಧಾನವಾಗುತ್ತಿದೆ.
ಖಾಲಿ ಹುದ್ದೆಗಳು ಕೆಲಸದ ವಿಳಂಬವನ್ನು ಸೃಷ್ಟಿಸುತ್ತಿದೆ ಮತ್ತು ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿದಂತಾಗುತ್ತಿದೆ ಎಂದು ಕಾರ್ಕಳ ಬಿಜೆಪಿ ಶಾಸಕ ಮಾಜಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸುವುದು ಜನರಿಗೆ ಮನೆ ನಿರ್ಮಿಸಲು ಅವಶ್ಯಕವಾಗಿದೆ. ಅವರು ನಗರಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿದೆ. ಉಡುಪಿಯಲ್ಲಿ ಇದಕ್ಕೆ ಇಬ್ಬರು ನೌಕರರು ಮಾತ್ರ ಇದ್ದಾರೆ.
ವಿಲೇವಾರಿ ಮಾಡಲು ಸ್ಥಳ ಭೇಟಿ ಮಾಡಲು ಯಾವುದೇ ಮಾರ್ಗವಿಲ್ಲ. ಅಪ್ಲಿಕೇಷನ್ಗಳು 2 ಸಾವಿರ ರೂ.,ಗೆ ಸಿಗುತ್ತಿದ್ದುದು ಈಗ 20 ಸಾವಿರ ರೂ. ಪಾವತಿಸುವಂತಾಗಿದೆ. ಶೇ.65ರಷ್ಟು ಸಿಬ್ಬಂದಿ ಕೊರತೆಯಿಂದ ಕೃಷಿ ಇಲಾಖೆ ಅತ್ಯಂತ ಕೆಟ್ಟಾಗಿದೆ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






