ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ: ಕೆಎಸ್ ಈಶ್ವರಪ್ಪ

ಬೆಂಗಳೂರು: ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ 15% ಮೀಸಲಾತಿಗೆ ನಮ್ಮ ವಿರೋಧವಿದೆ. ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಅಲ್ಪಸಂಖ್ಯಾತರ ಗುಲಾಮ ಆಗಿದೆ.
ಹಿಂದುಳಿದವರು ದಲಿತರಿಗೆ ಅನ್ಯಾಯ ಆಗಿದೆ. ಅಹಿಂದ ಹೆಸರೇಳಿಕೊಂಡು ಮೇಲೆ ಬಂದ ಸಿದ್ದರಾಮಯ್ಯ ಈಗ ಹಿಂದ ಮರೆತು ಕೇವಲ ಅ ಅ ಅ ಅಂತಿದ್ದಾರೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏನೆಲ್ಲ ಬೇಕೋ ಎಲ್ಲ ಮಾಡುತ್ತಿದ್ದಾರೆ,
ಇದು ದುರಾದೃಷ್ಟಕರ. 15% ಮೀಸಲಾತಿ ಕೊಡಲು ನಾವು ಬಿಡಲ್ಲ, ಹೋರಾಟ ಮಾಡುತ್ತೇವೆ. ಬರೀ ಮುಸಲ್ಮಾನರ ಕಡೆ ಸರ್ಕಾರ ತಿರುಗಿದರೆ ಭಾರೀ ಪೆಟ್ಟು ಖಚಿತ. ಮುಸ್ಲಿಮರನ್ನು ತೃಪ್ತಿ ಪಡಿಸುವ ಕೆಲಸ ಯಾರೂ ಒಪ್ಪಲ್ಲ. ಇದನ್ನು ರಾಜ್ಯಪಾಲರ ಒಪ್ಪಿಗೆಗೆ ಕಳಿಸಿದರೆ ಸಹಿ ಹಾಕಬಾರದು. ಈ ನಿರ್ಣಯವನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






