ಗಂಡನ ನೋಡಲು ಬಂದ ವಿಜಯಲಕ್ಷ್ಮಿ: ಪತ್ನಿ ತಂದುಕೊಟ್ಟ ಬ್ಯಾಗನ್ನು ಎತ್ತಲು ಪರದಾಡಿದ ನಟ ದರ್ಶನ್

ಅಕ್ಟೋಬರ್ 7, 2024 - 16:00
 0  35
ಗಂಡನ ನೋಡಲು ಬಂದ ವಿಜಯಲಕ್ಷ್ಮಿ: ಪತ್ನಿ ತಂದುಕೊಟ್ಟ ಬ್ಯಾಗನ್ನು ಎತ್ತಲು ಪರದಾಡಿದ ನಟ ದರ್ಶನ್

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ ಎನ್ನಲಾಗಿದೆ. ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲ್ತಿರುವ ಆರೋಪಿ ದರ್ಶನ್ ಇದರಿಂದಾಗಿ ಕಷ್ಟಪಡುತ್ತಿದ್ದಾರಂತೆ. ಬೆನ್ನು ನೋವು ಹೆಚ್ಚಾಗಿರುವುದರಿಂದ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ಆರೋಗ್ಯ ತಪಾಸಣೆ ನಡೆಸಿದ್ದರು. ಹೀಗಾಗಿ ದರ್ಶನ್ ಗೆ ಎಂಆರ್ ಐ ಸ್ಕ್ಯಾನ್ ಮಾಡಿಸಲು ವೈದ್ಯರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇದರ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿ ಪತಿಯನ್ನು ನೋಡಲು ಜೈಲಿಗೆ ಆಗಮಿಸಿದ್ದಾರೆ. ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮಿ ಜೊತೆ ಸುಶಂತ್ ನಾಯ್ಡು,ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಕೂಡಾ ಆಗಮಿಸಿದ್ದಾರೆ. ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು.  ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದರು.

ಬಟ್ಟೆ ಲಗೇಜ್‌ ತಂದಿದ್ದರು. ಪ್ರತಿ ಬಾರಿಯಂತೆ ಈ ಬಾರಿಯೂ ನಟ ದರ್ಶನ್‌ ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು ಹೋಗಿದ್ದಾರೆ. ಬ್ಯಾಕ್ ಎತ್ತಿಕೊಂಡು ಹೋಗಲಾಗದಷ್ಟು ನೋವಿನಿಂದ ದರ್ಶನ್‌ ಬಳಲುತ್ತಿದ್ದಾರೆ. ಬ್ಯಾಗ್‌ನ ಕೆಳಗೆ ಇಳಿಸಿ ನೋವಿನಿಂದ ಬಳಲುತ್ತಿದ್ದಾರೆ ನಟ ದರ್ಶನ್‌.

ಸಂದರ್ಶಕರ ಕೊಠಡಿಗೆ ವಿಜಯಲಕ್ಷ್ಮಿ ಹಾಗೂ ಇತರರು ತೆರಳಿದ್ದಾರೆ. ದರ್ಶನ್ ಗೆ ಬೆನ್ನುನೋವು ಹಿನ್ನಲೆ ಆರೋಗ್ಯ ವಿಚಾರಣೆ ಮಾಡಲು ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೋಡಿ ವಾಪಾಸಾಗಿದ್ದಾರೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಲೆ ಇದ್ದಾರೆ. ಇದಕ್ಕಾಗಿಯೇ ನಟನಿಗೆ ಸರ್ಜಿಕಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow