ಚೆನ್ನೈ ತಂಡದಲ್ಲಿ ಹೆಚ್ಚಾಯ್ತು ಆಂತರಿಕ ಬಿಕ್ಕಟ್ಟು: ಆಟಗಾರರ ಸ್ಥಿತಿ ನೋಡಿ ಫ್ಯಾನ್ಸ್ ಬೇಸರ!

ಎಪ್ರಿಲ್ 15, 2025 - 09:08
 0  18
ಚೆನ್ನೈ ತಂಡದಲ್ಲಿ ಹೆಚ್ಚಾಯ್ತು ಆಂತರಿಕ ಬಿಕ್ಕಟ್ಟು: ಆಟಗಾರರ ಸ್ಥಿತಿ ನೋಡಿ ಫ್ಯಾನ್ಸ್ ಬೇಸರ!

2025ರ IPL ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ತೀರ ಕಳಪೆಯಾಗಿದೆ. ಟೀಮ್​ ಚೆನ್ನೈ ಸೂಪರ್​ ಕಿಂಗ್ಸ್​ನ ಆಟ​​​ ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಇಡೀ ತಂಡ ಕಂಗೆಟ್ಟಿದೆ. ಅಭಿಮಾನಿಗಳನ್ನ ನೋವು, ಬೇಸರ, ಹತಾಶೆ ಆವರಿಸಿದೆ. 

ಸೀಸನ್​-18ರ ಐಪಿಎಲ್ ಭರದಿಂದ ಸಾಗಿದೆ. ರೋಚಕ ಪಂದ್ಯಗಳ ಹಣಾಹಣಿ ಸಖತ್ ಕಿಕ್ ನೀಡ್ತಿದೆ. ಆದ್ರೆ, ಫೈವ್ ಟೈಮ್ಸ್ ಚಾಂಪಿಯನ್ಸ್​ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮಾತ್ರ ದುಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಚೆನ್ನೈ, ಗೆಲುವಿನ ಹುಡುಕಾಟದಲ್ಲಿದೆ. ಸತತ ಸೋಲಿನ ನೋವು ಅಭಿಮಾನಿಗಳನ್ನ ಕಾಡ್ತಿದೆ. ಇದ್ರ ನಡುವೆ ಮತ್ತೊಂದು ಬೇಸರದ ಸುದ್ದಿ ಚೆನ್ನೈ ಕ್ಯಾಂಪ್​ನಿಂದ ಹೊರಬಿದ್ದಿದೆ

ಸೀಸನ್​​ ಮಧ್ಯೆದಲ್ಲಿ ನಾಯಕತ್ವದ ಬದಲಾವಣೆಯಾದ ಬೆನ್ನಲ್ಲೇ ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಋತುರಾಜ್​ ಗಾಯಕ್ವಾಡ್​ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಧೋನಿ ಸೀಸನ್​​ನ ಉಳಿದ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸ್ತಾರೆ ಅನ್ನೋ ಅಧಿಕೃತ ಪ್ರಕಟಣೆಯನ್ನ ಸಿಎಸ್​ಕೆ ಫ್ರಾಂಚೈಸಿ ಹೊರಡಿಸಿದೆ. ಹಾಗಿದ್ರೂ, ಚೆನ್ನೈ ತಂಡದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.

ಇಂಜುರಿ ಕಾರಣಕ್ಕೆ ಋತುರಾಜ್ ಗಾಯಕ್ವಾಡ್​​, ಟೂರ್ನಿಯಿಂದ ಔಟ್​ ಆಗಿದ್ರೂ ಋತುರಾಜ್​ ತಂಡದಲ್ಲೇ ಉಳಿದಿದ್ದಾರೆ. ತಂಡದೊಂದಿಗೆ ಟ್ರಾವೆಲ್​ ಮಾಡ್ತಿರೋ ಋತುರಾಜ್​​ ಗಾಯಕ್ವಾಡ್​ ಮೈದಾನಕ್ಕೂ ಬರ್ತಿದ್ದಾರೆ. ಆದ್ರೆ, ಧೋನಿ ಜೊತೆಗಿನ ಸಂಬಂಧ ಮೊದಲಿನಂತಿಲ್ಲ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್​ ರೂಮ್​ ಗುಸುಗುಸು ಆದ್ರೆ, ಇನ್ನೊಂದೆಡೆ ಸೋಷಿಯಲ್​ ಮೀಡಿಯಾದಲ್ಲೂ ಧೋನಿಯನ್ನ ಋತುರಾಜ್​ ಅನ್​ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ

ಇನ್ಸ್​​ಸ್ಟಾಗ್ರಾಂನಲ್ಲಿ ಋತುರಾತ್​ ಧೋನಿ ಅಕೌಂಟ್​​ನ ಫಾಲೋ ಮಾಡ್ತಿಲ್ಲ. ಸದ್ಯ ಧೋನಿಯನ್ನ ಋತುರಾಜ್​​ ಅನ್​​ಫಾಲೋ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್​ ಆಗಿದೆ. ಇದು ಶೀತಲಸಮರದ ಗಾಸಿಪ್​ಗೆ ಕಿಡಿ ಹಚ್ಚಿದೆ. ಆದ್ರೆ, ಕೆಲ ಫ್ಯಾನ್ಸ್​ ಮಾತ್ರ ಇನ್​ಸ್ಟಾದಲ್ಲಿ ಈ ಹಿಂದೆಯೂ ಋತುರಾಜ್​ ಗಾಯಕ್ವಾಡ್​, ಧೋನಿನ ಫಾಲೋ ಮಾಡ್ತಿರಲಿಲ್ಲ ಎಂಬ ವಾದ ಮಾಡ್ತಿದ್ದಾರೆ. ಈ ವಾದ-ಪ್ರತಿವಾದದ ಹೊರತಾಗಿಯೂ ಚೆನ್ನೈ ಕ್ಯಾಂಪ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ನಡೀತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow