ಜೆಸಿಬಿ ಮೂಲಕ ನಿಧಿ ಅಗೆಯುತ್ತಿದ್ದ ಗ್ಯಾಂಗ್ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

ವಿಜಯಪುರ:- ಇಲ್ಲಿನ ಮದರಿ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಅದರಂತೆ ರಾತ್ರೋ ರಾತ್ರಿ ಜೆಸಿಬಿ ಮೂಲಕ ನಿಧಿ ಅಗೆಯುತ್ತಿದ್ದ 6 ಮಂದಿ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಮದರಿ ಗ್ರಾಮದಲ್ಲಿ ಜರುಗಿದೆ.
ಮದರಿ ಗ್ರಾಮದ ಹಳೆಯದಾದ ಜಾಗದಲ್ಲಿ ನಿಧಿ ಇದೆ ಎಂದು ತಿಳಿದು ಬಂಧಿತ ಗ್ಯಾಂಗ್, ನಿಧಿ ಪತ್ತೆಗೆ ಬೇಕಾದ ಪರಿಕರಗಳೊಂದಿಗೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ನಿಧಿಗಳ್ಳರನ್ನು ಲಾಕ್ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಮುದ್ದೇಬಿಹಾಳ, ಕಮತಗಿ ಸೇರಿದಂತೆ ವಿವಿಧೆಡೆಯಿಂದ ಖದೀಮರು ಬಂದಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






