ಜೆಸಿಬಿ ಮೂಲಕ ನಿಧಿ ಅಗೆಯುತ್ತಿದ್ದ ಗ್ಯಾಂಗ್ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

ಜೂನ್ 18, 2025 - 22:04
 0  23
ಜೆಸಿಬಿ ಮೂಲಕ ನಿಧಿ ಅಗೆಯುತ್ತಿದ್ದ ಗ್ಯಾಂಗ್ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

ವಿಜಯಪುರ:- ಇಲ್ಲಿನ ಮದರಿ ಗ್ರಾಮದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಅದರಂತೆ ರಾತ್ರೋ ರಾತ್ರಿ ಜೆಸಿಬಿ  ಮೂಲಕ ನಿಧಿ ಅಗೆಯುತ್ತಿದ್ದ 6 ಮಂದಿ ಖದೀಮರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಮದರಿ ಗ್ರಾಮದಲ್ಲಿ ಜರುಗಿದೆ. 

ಮದರಿ ಗ್ರಾಮದ ಹಳೆಯದಾದ ಜಾಗದಲ್ಲಿ ನಿಧಿ ಇದೆ ಎಂದು ತಿಳಿದು ಬಂಧಿತ ಗ್ಯಾಂಗ್, ನಿಧಿ ಪತ್ತೆಗೆ ಬೇಕಾದ ಪರಿಕರಗಳೊಂದಿಗೆ ಆಗಮಿಸಿದ್ದರು. ಈ ವೇಳೆ ಸ್ಥಳೀಯರು ನಿಧಿಗಳ್ಳರನ್ನು ಲಾಕ್ ಮಾಡಿ ಪೊಲೀಸರಿಗೊಪ್ಪಿಸಿದ್ದಾರೆ. ಮುದ್ದೇಬಿಹಾಳ, ಕಮತಗಿ ಸೇರಿದಂತೆ ವಿವಿಧೆಡೆಯಿಂದ  ಖದೀಮರು ಬಂದಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow