ನಟ ದರ್ಶನ್ʼಗೆ ಬಿಗ್ ರಿಲೀಫ್: ಬೆಂಗಳೂರು ಬಿಟ್ಟು ಹೋಗಲು ಅವಕಾಶ ನೀಡಿದ ಹೈಕೋರ್ಟ್!

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್, ನಿಧಾನಕ್ಕೆ ಸಾರ್ವಜನಿಕ ಜೀವನಕ್ಕೆ ಮರಳುತ್ತಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರು ಬಿಟ್ಟು ಎಲ್ಲೇ ತೆರಳಬೇಕೂ ಎಂದರೂ ಕೋರ್ಟ್ನಿಂದ ಅನುಮತಿ ಪಡೆಯಬೇಕಿತ್ತು. ಆದರೆ, ಈಗ ಕರ್ನಾಟಕ ಹೈಕೋರ್ಟ್ ನಿಯಮಗಳನ್ನು ಸಡಿಲಿಸಿದೆ. ಇದರಿಂದ ದರ್ಶನ್ ಅವರು ನಿಟ್ಟುಸಿರು ಬಿಟ್ಟಿದ್ದಾರೆ.
ಹೈಕೋರ್ಟ್ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಈ ಕುರಿತು ಆದೇಶ ನೀಡಿದ್ದಾರೆ. ದರ್ಶನ್ ಅವರು ಬೆಂಗಳೂರು ಬಿಟ್ಟು ಹೋಗುವಾಗ ಇದ್ದ ಷರತ್ತು ಅನ್ನು ಸಡಿಲಿಕೆ ಮಾಡಿದ್ದು ವಿದೇಶಕ್ಕೆ ಹೋಗುವಾಗ ಮಾತ್ರ ಅನುಮತಿ ಪಡೆಯಲೇಬೇಕು ಎಂದು ಆದೇಶಿಸಿದೆ.
ದರ್ಶನ್ಗೆ ಹೈಕೋರ್ಟ್ ಜಾಮೀನು ಸಿಕ್ಕ ಮೇಲೆ ಅವರು ಬೆಂಗಳೂರು ಬಿಟ್ಟು ಹೋಗುವಂತಿರಲಿಲ್ಲ. ಹೀಗಾಗಿ ದರ್ಶನ್ ಮೈಸೂರು ಭೇಟಿ, ಹೊರ ರಾಜ್ಯಗಳಿಗೆ, ವಿದೇಶಗಳಿಗೆ ಶೂಟಿಂಗ್, ತೋಟದ ಮನೆಗೆ ಹೋಗುವುದಕ್ಕೆ ಕೋರ್ಟ್ ಕಡಿವಾಣ ಹಾಕಿತ್ತು. ಆದರೆ ಇದರಲ್ಲಿ ಈಗ ಬೆಂಗಳೂರು ಬಿಟ್ಟು ಹೋಗುವಾಗ ಇದ್ದ ಷರತ್ತು ಅನ್ನು ಸಡಿಲಿಕೆ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






