ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ: ಶಾಸಕ ಯತ್ನಾಳ್ ಹೊಸ ಬಾಂಬ್

ವಿಜಯಪುರ: ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಇಳಿಸೋಕೆ ಪ್ಲಾನ್ ನಡೆದಿದೆ. ಹಾಗೇ ನನ್ನ ಉಚ್ಚಾಟನೆ ಹಿಂದೆಯೂ ಷಡ್ಯಂತ್ರ ಇದೆ. ನನ್ನ ಉಚ್ಚಾಟನೆ ಹಿಂದೆ ಕಾಂಗ್ರೆಸ್ ಮಹಾನಾಯಕ ಇದ್ದಾನೆ. ಕಾಂಗ್ರೆಸ್ ಒಡೆದು ಬರ್ತಿವಿ ಎಂದು ಭರವಸೆ ಕೊಟ್ಟ ಬಳಿಕ ನನ್ನ ಉಚ್ಚಾಟನೆ ನಡೆದಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಯತ್ನಾಳ್ ಪಕ್ಷದಲ್ಲಿ ಇರೋತನ ಅವರಿಗೆ ಬರೋಕೆ ಆಗೋದಿಲ್ಲ. ಯತ್ನಾಳ್ ಕಟ್ಟಾ ಹಿಂದೂ ಅವನನ್ನ ಹೊರಹಾಕುವವರೆಗೂ ಬರೊಲ್ಲ ಎಂದು ನನ್ನ ಉಚ್ಚಾಟನೆ ಮಾಡಿಸಿದ್ದಾರೆ. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಇದೆ. ಆದ್ರೆ ಅದು ಫೇಲ್ ಆಗಿದೆ ಏಕೆಂದರೆ ಆ ಮಹಾನಾಯಕನ ಹಿಂದೆ ಯಾರಿಲ್ಲ ಎಂದು ಗೊತ್ತಾಗಿ ಕೈ ಬಿಟ್ಟಿದ್ದಾರೆ. ಆ ಮಹಾನಾಯಕ ಹಿಂದೆ 10 ಶಾಸಕರು ಇಲ್ಲ ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






