ಪ್ರೀತಿಸಿ ಕೈಕೊಟ್ಟ ಪ್ರಿಯಕರ: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ!

ದಿನಬೆಳಗಾದರೆ ಇಂತ ಹತ್ತಾರು ಆತ್ಮಹತ್ಯೆಯ ಕೇಸ್ ಬಗ್ಗೆ ಓದುತ್ತಲೇ ಇರುತ್ತೇವೆ. ಆಘಾತಕಾರಿ ವಿಚಾರ ಅಂದ್ರೆ ಇನ್ನೂ ಬದುಕನ್ನು ನೋಡದ, ಬದುಕಿ ಬಾಳ ಬೇಕಾದ ಯುವಜನರೇ ದಿನನಿತ್ಯ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇದೀಗ ಮುಂಬೈನಲ್ಲಿ ತನ್ನ ಪ್ರೇಮಿ ಬೇರೊಬ್ಬಳನ್ನು ಮದುವೆಯಾದ ಕಾರಣದಿಂದ ಬೇಸತ್ತ ಮಲಾಡ್ನ 22 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ ಪ್ರಿಯಕರನ ವಿರುದ್ಧ ಕೇಸ್ ದಾಖಲಾಗಿದೆ. ಜನವರಿಯಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ವಂಚಿಸಿದ ಜಿತೇಶ್ ಎಂಬಾತನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ 4 ವರ್ಷಗಳ ಕಾಲ ಸಂಬಂಧ ಹೊಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ವಂಚನೆಯಿಂದ ಮನನೊಂದ ಆಕೆ ಫೆಬ್ರವರಿ 10ರಂದು ತನ್ನ ಅಜ್ಜಿಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಿತೇಶ್ ಜನವರಿ 26ರಂದು ತನ್ನ ತವರು ಗ್ರಾಮದಲ್ಲಿ ಬೇರೆ ಮಹಿಳೆಯೊಂದಿಗೆ ವಿವಾಹವಾದರು. ಆತನ ಪ್ರೇಯಸಿಗೆ ಈ ವಿಷಯ ತಿಳಿದಾಗ, ಆಕೆ ಆಘಾತಗೊಂಡಳು. ಫೆಬ್ರವರಿ 9ರ ಬೆಳಗಿನ ಜಾವ 1.30ರ ಸುಮಾರಿಗೆ ಆಕೆ ಮನೆಗೆ ಬಂದಾಗ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿತ್ತು. ಏನಾಯಿತೆಂದು ಆಕೆಯ ತಾಯಿ ವಿಚಾರಿಸಿದಾಗ, ತಾನು ಕೆಳಗೆ ಬಿದ್ದೆ ಎಂದು ಹೇಳಿಕೊಂಡಿದ್ದಳು. ಮರುದಿನ ಬೆಳಿಗ್ಗೆ ಆಕೆ ಕೆಲಸಕ್ಕೆ ಹೋದವಳು ವಾಪಾಸ್ ಬರಲೇ ಇಲ್ಲ.
ಅದಾದ ನಂತರ ಆಕೆಯ ತಾಯಿ ಮತ್ತು ಸಹೋದರ ಆಕೆಗೆ ಹಲವು ಬಾರಿ ಫೋನ್ ಮಾಡಲು ಪ್ರಯತ್ನಿಸಿದರು. ಆದರೆ ಆಕೆ ಪ್ರತಿಕ್ರಿಯಿಸಲಿಲ್ಲ. ಆ ರಾತ್ರಿಯ ನಂತರ, ಆಕೆಯ ಸಹೋದರ ವಾಕಿಂಗ್ಗೆ ಹೋದಾಗ, ಆಕೆ ತನ್ನ ಅಜ್ಜಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆಂದು ತಿಳಿದುಬಂದಿದೆ. ಆಕೆಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಬರುವಷ್ಟರಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






