ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು: ಪೈಲ್ವಾನ್ ಸಿನಿಮಾ ನಟ ಹೇಳಿದ್ದೇನು..?

‘ನಮ್ಮ ಅಮ್ಮ ನಮಗೆ ಬದುಕುವ ರೀತಿಯನ್ನು, ಇನ್ನೊಬ್ಬರನ್ನು ಗೌರವಿಸುವ ರೀತಿಯನ್ನು ಹೇಳಿಕೊಟ್ಟಿದ್ದಾಳೆ. ಬೇರೆಯವರ ಅನ್ನ ಕಿತ್ತುಕೊಂಡು ತಿನ್ನಬೇಡ. ನಿನ್ನ ಕಾಲಮೇಲೆ ನಿಂತುಕೊಂಡು ಬದುಕು ಅಂತ ಹೇಳಿಕೊಟ್ಟಿದ್ದಾಳೆ. ಅದೇ ಮಾರ್ಗದಲ್ಲಿ ನಾನು ಬದುಕುತ್ತಿದ್ದೇನೆ. ಜರ್ನಿಯಲ್ಲಿ ಎಲ್ಲರಿಗೂ ನೋವು ನಲಿವು ಇದ್ದೇ ಇರುತ್ತದೆ.
ಗುರಿ ಬಿಡಬಾರದು. ಸುಸಂಸ್ಕೃತ ದಾರಿ ಮರೆಯಬಾರದು. ಸಂತ್ರಸ್ತೆಯ ಆಡಿಯೋ ಬಗ್ಗೆ ಆಕೆಯೇ ಸ್ಪಷ್ಟನೆ ನೀಡಿದ್ದಾರೆ. ಅಪ್ಪಣ್ಣನ ತಪ್ಪು ಇಲ್ಲ ಅಂತ ಆಕೆ ಹೇಳಿದ್ದಾರೆ. ಹಾಗಾಗಿ ಎಲ್ಲರಿಗೂ ಉತ್ತರ ಸಿಕ್ಕಿದೆ’ ಎಂದು ಅಪ್ಪಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






