ಮನೆ ಉಳಿಸಿಕೊಳ್ಳಲು ಚಿನ್ನ ಅಡವಿಟ್ಟ ಭಾಗ್ಯ: ಈಕೆ ಕಷ್ಟ ಯಾರಿಗೂ ಬೇಡಪ್ಪ!

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗ್ತಿದೆ. ತಾಳಿಗೆ ಮಹತ್ವ ಕೊಟ್ಟಿದ್ದ ಭಾಗ್ಯ ಕೊನೆಗೂ ತಾಳಿ ತೆಗೆದು ತಾಂಡವ್ಗೆ ಸವಾಲ್ ಹಾಕಿದ್ದಾಳೆ. ಇನ್ನೂ ಭಾಗ್ಯಲಕ್ಷ್ಮೀ’ ಧಾರಾವಾಹಿಯನ್ನ.. ಅದರಲ್ಲೂ ಭಾಗ್ಯ ಪಾತ್ರಧಾರಿಯ ಬದುಕನ್ನ ಕೆಲ ವೀಕ್ಷಕರು ತೀರಾ ಸೀರಿಯಸ್ ಆಗಿ ಪರಿಗಣಿಸಿದ್ದಾರೆ. ಅದನ್ನ ಜಸ್ಟ್ ಸೀರಿಯಲ್ನಂತೆ ನೋಡದೆ.. ಕಥೆಯಲ್ಲಿ ಬರುವ ತಿರುವುಗಳ ಬಗ್ಗೆ ಸರಿ - ತಪ್ಪು ಲೆಕ್ಕಾಚಾರದಲ್ಲಿ ವೀಕ್ಷಕರು ಮುಳುಗಿದ್ದಾರೆ.
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮನೆ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾಳೆ. ಭಾಗ್ಯ ಕೆಲಸ ಮಾಡುವ ರೆಸಾರ್ಟ್ ಮ್ಯಾನೇಜರ್ ಬಳಿ ಭಾಗ್ಯ ಹೋಗಿ ಸ್ವಲ್ಪ ಅಡ್ವಾನ್ಸ್ ಹಣ ಬೇಕಾಗಿತ್ತು, ಸಾಲ ಎಂದು ಕೊಡಿ, ಅದನ್ನು ಬಡ್ಡಿ ಸಮೇತ ನಾನು ತೀರಿಸುತ್ತೇನೆ, ದಯವಿಟ್ಟು ಇಲ್ಲ ಅನ್ನಬೇಡಿ, ಹೇಗಾದರೂ ಮಾಡಿ, ಹಣ ಕೊಡಿ, ಅದನ್ನು ತಪ್ಪದೇ ಹಿಂದಿರುಗಿಸುತ್ತೇನೆ ಎಂದು ಹೇಳುತ್ತಾಳೆ. ಆದರೆ ಮ್ಯಾನೇಜರ್ ಹಣ ಕೊಡಲು ಒಪ್ಪುವುದಿಲ್ಲ, ಹೀಗಾಗಿ ಭಾಗ್ಯ ಪೆಚ್ಚು ಮೋರೆ ಹಾಕಿಕೊಂಡು ಮನೆಗೆ ಮರಳುತ್ತಾಳೆ. ಮನೆಗೆ ಮರಳುತ್ತಲೇ, ಅಲ್ಲಿ ಮತ್ತೊಂದು ಸಂಕಷ್ಟ ಭಾಗ್ಯಗೆ ಎದುರಾಗಿದೆ.
ಮನೆ ಉಳಿಸಿಕೊಳ್ಳಲು ಉಳಿತಾಯದ ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಿ ಹೊರಗೆ ಬಂದ ಧರ್ಮರಾಜ್, ಹಣದ ಚೀಲವನ್ನು ಕೈಯಲ್ಲಿ ಹಿಡಿದುಕೊಂಡು, ಇನ್ನೇನು ಮನೆಗೆ ತೆರಳಬೇಕು ಎಂದುಕೊಳ್ಳುವಷ್ಟರಲ್ಲಿ, ಯಾರೋ ಖದೀಮರು ಹಣದ ಚೀಲವನ್ನು ಧರ್ಮರಾಜ್ ಕೈಯಿಂದ ಎಗರಿಸಿದ್ದಾರೆ. ಧರ್ಮರಾಜ್ ಅವರ ಹಿಂದೆ ಓಡಿ ಹೋದರೂ, ಪ್ರಯೋಜನವಾಗಿಲ್ಲ. ಹೀಗಾಗಿ ಬರಿಗೈಯಲ್ಲಿ ಅವರು ಮನೆಗೆ ಮರಳಿದ್ದಾರೆ. ಮತ್ಯಾರಿಗೋ ಫೋನ್ ಮಾಡಿದರೂ, ಅವರೂ ಹಣ ನೀಡಲು ಒಪ್ಪಿಲ್ಲ.
ಮದುವೆಗೆ ಸಹಕರಿಸಿದ ಮತ್ತು ಎಲ್ಲ ರೀತಿಯ ವ್ಯವ್ಯಸ್ಥೆ ಮಾಡಿದ ಶೌರ್ಯಗೆ, ತಾಂಡವ್ ಮತ್ತು ಶ್ರೇಷ್ಠಾ ಮನೆಯಲ್ಲೇ ಡಿನ್ನರ್ ಪಾರ್ಟಿ ಆಯೋಜಿಸಿದ್ದಾರೆ. ಊಟವನ್ನು ನೀನೇ ತಯಾರಿಸಿದ್ದೀಯಾ ಎಂದು ಶೌರ್ಯ ಶ್ರೇಷ್ಠಾ ಬಳಿ ಕೇಳಿದಾಗ, ತಾಂಡವ್ ಇಲ್ಲ, ಅವಳೆಲ್ಲಿ ತಯಾರಿಸುತ್ತಾಳೆ? ಎಲ್ಲವನ್ನೂ ಹೋಟೆಲ್ನಿಂದ ಆರ್ಡರ್ ಮಾಡಿದ್ದೇವೆ ಎನ್ನುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಪೆಚ್ಚಾಗುತ್ತಾಳೆ.
ಊಟ ಮಾಡುತ್ತಾ, ತಾಂಡವ್ ಇಂದು ನಾನು ಅತ್ಯಂತ ಖುಷಿಯಲ್ಲಿದ್ದೇನೆ. ಭಾಗ್ಯಗೆ ಮತ್ತೊಂದು ಸಂಕಟ ಎದುರಾಗಿದೆ, ಮನೆಯನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ, ಅವಳು ಈಗ ಬೀದಿಪಾಲಾಗುತ್ತಾಳೆ ಎಂದು ಹೇಳುತ್ತಾನೆ. ಮನೆಯ ತಿಂಗಳ ಸಾಲದ ಕಂತನ್ನು ನಾನು ಕಟ್ಟಿಲ್ಲ, ಅದರಿಂದ ಮನೆಯನ್ನು ಈಗ ಬ್ಯಾಂಕ್ ಅಧಿಕಾರಿಗಳು ಜಪ್ತಿ ಮಾಡುತ್ತಾರೆ ಎನ್ನುತ್ತಾನೆ. ಆಗ ಶೌರ್ಯ, ಹಾಗಾಗುವುದಿಲ್ಲ, ಭಾಗ್ಯ ಅದೆಲ್ಲವನ್ನೂ ಎದುರಿಸಿ ವಿಜಯಿಯಾಗುತ್ತಾಳೆ ಎಂದು ಹೇಳುತ್ತಾನೆ. ಇತ್ತ ಮನೆಯಲ್ಲಿ ಭಾಗ್ಯ, ಮನೆ ಉಳಿಸಿಕೊಳ್ಳಲು ಚಿನ್ನ ಅಡವಿಡುವ ನಿರ್ಧಾರ ಮಾಡಿದ್ದಾಳೆ. ಆಗ ಮನೆಯವರೆಲ್ಲರೂ, ತಮ್ಮಲ್ಲಿದ್ದ ಬಳೆ, ಸರ ಹೀಗೆ ಸ್ವಲ್ಪ ಸ್ವಲ್ಪ ಚಿನ್ನವನ್ನೂ ನೀಡಿದ್ದಾರೆ. ಎಲ್ಲವನ್ನೂ ಒಟ್ಟಾಗಿಸಿ, ಅಡವಿರಿಸಿ, ಹಣ ಪಡೆದುಕೊಂಡು ಮನೆ ಉಳಿಸಿಕೊಳ್ಳಲು ಮುಂದಾಗಿದ್ದಾಳೆ.
ಒಟ್ಟಾರೆ ಭಾಗ್ಯಳ ಈ ಕಷ್ಟ ಕಂಡು ವೀಕ್ಷಕರು ಮರುಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






