ಮೂರು ಚುನಾವಣೆ ಗೆದ್ದಿದ್ದೇವೆ, ಮುಂದೆ 2028 ರಲ್ಲೂ ನಮ್ಮದೇ ಸರ್ಕಾರ ಬರಲಿದೆ: ಸಚಿವ ಚಲವರಾಯಸ್ವಾಮಿ

ಜನವರಿ 28, 2025 - 14:00
 0  14
ಮೂರು ಚುನಾವಣೆ ಗೆದ್ದಿದ್ದೇವೆ, ಮುಂದೆ 2028 ರಲ್ಲೂ ನಮ್ಮದೇ ಸರ್ಕಾರ ಬರಲಿದೆ: ಸಚಿವ ಚಲವರಾಯಸ್ವಾಮಿ

ಬೆಂಗಳೂರು: ಮೂರು ಚುನಾವಣೆ ಗೆದ್ದಿದ್ದೇವೆ, ಮುಂದೆ 2028 ರಲ್ಲೂ ನಮ್ಮದೇ ಸರ್ಕಾರ ಬರಲಿದೆ ಎಂದು  ಕೃಷಿ ಸಚಿವ ಚಲವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ, ಅವರು ಸಮರ್ಥ ಆಡಳಿತಗಾರ ಕಾಂಗ್ರೆಸ್ ನಲ್ಲಿ ಇರುವುದು ಬಿಜೆಪಿಗೆ ಸಹಿಸುವುದಕ್ಕೆ ಸಾಧ್ಯವಿಲ್ಲ. ನಾವು ಮೂರು ಚುನಾವಣೆ ಗೆದ್ದಿದ್ದೇವೆ, ಮುಂದೆ 2028 ರಲ್ಲೂ ನಮ್ಮದೇ ಸರ್ಕಾರ ಬರಲಿದೆ. ಯಾವುದೇ ತೀರ್ಮಾನ ಹೈಕಮಾಂಡ್ ನಾಯಕರದ್ದು, ನಾನಾಗಲಿ ಯಾರೇ ಆಗಲಿ ಮಾತಾಡಿದರೂ ಅದು ಅಂತಿಮ ಅಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಚಲವರಾಯಸ್ವಾಮಿ, ಮುಡಾದಲ್ಲಿ 50-50 ಅನುಪಾತದಲ್ಲಿ ಸಾವಿರಾರು ಸೈಟು ನೀಡಲಾಗಿದೆ. ಇದು ಆಗಿರೋದೆ ಬಿಜೆಪಿ ಕಾಲದಲ್ಲಿಯೇ, ತನಿಖೆ ಆಗೋದಾದರೆ ಬಿಜೆಪಿ ಕಾಲದ ತನಿಖೆಯೇ ಆಗಬೇಕು. ನಮಗೇನೂ ಆತಂಕ ಇಲ್ಲ, ಆದರೆ ದುರಾದೃಷ್ಟ ನಮ್ಮದು, ಸಿಎಂ ಪತ್ನಿಯವರೂ ಸೈಟು ವಾಪಸ್ ಕೊಟ್ಟಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow