ಸತ್ತಿದ್ದೂ ಗೊತ್ತಿಲ್ಲದೇ ಮೃತಪಟ್ಟ ಮಗನೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿಗಳು!

ಅಕ್ಟೋಬರ್ 30, 2024 - 22:18
 0  29
ಸತ್ತಿದ್ದೂ ಗೊತ್ತಿಲ್ಲದೇ ಮೃತಪಟ್ಟ ಮಗನೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿಗಳು!

ಹೈದರಾಬಾದ್ಹೈದರಾಬಾದ್​​ ನಾಗೋಲ್​​ಗೆ ಸೇರಿದ ಜೈಪುರ ಕಾಲೋನಿಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆಹೌದು  ಮೃತಪಟ್ಟಿದ್ದಾನೆಂದು ತಿಳಿಯದೇ ಮಗನ ಮೃತ ದೇಹದೊಂದಿಗೆ ಅಂಧ ದಂಪತಿಗಳು 4 ದಿನ ಕಳೆದಿದ್ದಾರೆ. ಮೃತ ವ್ಯಕ್ತಿಯನ್ನು 30 ವರ್ಷದ ಪ್ರಮೋದ್ ಎಂದು ಗುರುತಿಸಲಾಗಿದೆ.

ಪತಿ ನಿವೃತ್ತ ಸರ್ಕಾರಿ ನೌಕರ ಕಾಲುವ ರಮಣ ಮತ್ತು ಅವರ ಪತ್ನಿ ಶಾಂತಿಕುಮಾರಿ (60) ಮೇಲ್ಪಟ್ಟಿದ್ದು, ದೃಷ್ಟಿ ವಿಕಲಚೇತನರಾಗಿದ್ದರು. ದಂಪತಿ ತಮ್ಮ ಮಗ ಪ್ರಮೋದ್ನೊಂದಿಗೆ ಹೈದರಾಬಾದ್ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಮೃತಪಟ್ಟು 4 ದಿನದ ಬಳಿಕ ಅಕ್ಕಪಕ್ಕದವರು ಅವರ ಮನೆಯಿಂದ ಬರುತ್ತಿದ್ದ ದುರ್ವಾಸನೆಯಿಂದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ನಾಗೋಲೆ ಪೊಲೀಸ್ ಠಾಣೆಯ ಅಧಿಕಾರಿ ಸೂರ್ಯ ನಾಯಕ್ ಮಾತನಾಡಿ, ವಿಚ್ಛೇದನದ ಬಳಿಕ ಪ್ರಮೋದ್ ಪತ್ನಿ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಆತನನ್ನು ಬಿಟ್ಟುಹೋಗಿದ್ದಳು. ಪತ್ನಿ ಬಿಟ್ಟುಹೋದ ಬಳಿಕ ಪ್ರಮೋದ್ ಮದ್ಯವ್ಯಸನಿಯಾಗಿದ್ದ. ದಂಪತಿಗಳು ಆತನನ್ನು ಊಟಕ್ಕಾಗಿ ಕರೆದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಅವರ ಧ್ವನಿ ತುಂಬಾ ದುರ್ಬಲವಾಗಿದ್ದ ಕಾರಣ ಅವರ ಧ್ವನಿ ನೆರೆಹೊರೆಯವರಿಗೆ ಕೇಳಿಸದೇ ಇರಬಹುದು ಎಂದು ತಿಳಿಸಿದರು.

ನೆರೆಹೊರೆಯವರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಭೇಟಿ ನೀಡಿದಾಗ ದಂಪತಿ ರಮಣ ಮತ್ತು ಶಾಂತಿಕುಮಾರಿ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ಬಳಿಕ ಅವರಿಗೆ ಉಪಚಾರ ಮಾಡಲಾಯಿತು. ಅವರ ಹಿರಿಯ ಮಗ ಪ್ರದೀಪ್ ಹೈದರಾಬಾದ್ ಇನ್ನೊಂದು ಕಡೆ ವಾಸಿಸುತ್ತಿದ್ದು, ದಂಪತಿಯನ್ನು ಅವರ ಹಿರಿಯ ಮಗನಿಗೆ ಒಪ್ಪಿಸಲಾಯಿತು ಎಂದು ತಿಳಿಸಿದರು. 4-5 ದಿನಗಳ ಹಿಂದೆ ಪ್ರಮೋದ್ ನಿದ್ದೆಯಲ್ಲಿಯೇ ಮೃತಪಟ್ಟಿದ್ದು, ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow