ಸರ್ ಇಲ್ಲಿ ಗಲಾಟೆ ಆಗುತ್ತಿದೆ ಬೇಗ ಬನ್ನಿ: ವ್ಯಕ್ತಿ ಕರೆಗೆ ಓಡೋಡಿ ಬಂದ ಪೊಲೀಸರಿಗೆ ಈತ ಹೇಳಿದ್ದೇನು ಗೊತ್ತಾ!?

ಚಿಕ್ಕಮಗಳೂರು : ಸರ್ ಪ್ಲೀಸ್ ಸರ್ ಬೇಗ ಬನ್ನಿ. ಇಲ್ಲಿ ತುಂಬಾ ಗಲಾಟೆ ಆಗುತ್ತಿದೆ. ನೀವು ಬೇಗ ಬೇಗ ಬರಬೇಕು ಎಂದು 112 ಕ್ಕೆ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಬಳಿಕ ಪೊಲೀಸರು ಓಡೋಡಿ ಬಂದು ಎಲ್ಲಪ್ಪ ಗಲಾಟೆ ಎಂದಾಗ ಸರ್ ಪ್ಲೀಸ್ ಸರ್ ನಮ್ಮ ಮಾವನ ಮನೆಗೆ ಡ್ರಾಪ್ ಮಾಡಿ ಎಂದಿದ್ದಾನೆ.
ವ್ಯಕ್ತಿ ಮಾತಿಗೆ ಪೊಲೀಸರೇ ಶಾಕ್ ಆಗಿ ನಿಂತರು. ಎಸ್, ಈ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಜರುಗಿದೆ. ಮೊದಲು 112 ಗೆ ಫೋನ್ ಮಾಡಿ ಸರ್ ಇಲ್ಲಿ ಗಲಾಟೆ ಆಗುತ್ತಿದೆ ಬೇಗ ಬನ್ನಿ ಅಂತ ಮನವಿ ಮಾಡಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರಿಗೆ ಮಾವನ ಮನೆಗೆ ಡ್ರಾಪ್ ಮಾಡುವಂತೆ ಮನವಿ ಮಾಡಿದ್ದಾನೆ.
ಗಾಡಿ ಯಾವು ಇಲ್ಲ. ಮಳೆ ಬೇರೆ, ಪಲ್ಗುಣಿ ಗ್ರಾಮಕ್ಕೆ ಡ್ರಾಪ್ ಮಾಡುವಂತೆ ರಿಕ್ವೆಸ್ಟ್ ಮಾಡಿದ್ದಾನೆ. ಯುವಕನ ಮಾತು ಕೇಳಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ... ನಗಬೇಕೋ... ತಿಳಿಯಲಿಲ್ಲ. ತರುವೆ ಗ್ರಾಮದ ಅಶೋಕ್ ಎಂಬ ವ್ಯಕ್ತಿಯಿಂದ ಪೊಲೀಸರಿಗೆ ಫೋನ್ ಮಾಡಿರುವುದು ತಿಳಿದು ಬಂದಿದೆ. ಮಾವನ ಮನೆಗೆ ಊಟಕ್ಕೆ ಹೊರಟಿದ್ದ ಅಶೋಕ್ ಗೆ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಕೊನೆಗೆ ಪೊಲೀಸರಿಗೆ ಲಾರಿ ಅಡ್ಡ ಹಾಕಿ ಆ ವ್ಯಕ್ತಿಯನ್ನ ಮಾವನ ಮನೆಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






