ಸುಖ ಸಂಸಾರಕೇಕಾಗಿ ಈ ಟಿಪ್ಸ್ ಫಾಲೋ ಮಾಡಿ: ಹಾಲು-ಜೇನು ತರ ಗಂಡ-ಹೆಂಡತಿ ಜೀವಿಸಿ!

ಪ್ರತಿನಿತ್ಯವೂ ನಾವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿಯನ್ನೇ ಕೇಳುತ್ತಿರುತ್ತೇವೆ. ಸಂಬಂಧಗಳು ಗಟ್ಟಿಯಾಗು ವಂತಹ ಸಮಯದಲ್ಲಿ ಅದು ಇನ್ನಷ್ಟು ದುರ್ಬಲ ವಾಗುತ್ತಿರುವುದು ಗೋಚರವಾಗುತ್ತಿದೆ.
ಇಂತಹ ಸಮಯದಲ್ಲಿ ಯಾವುದೇ ಸಂಬಂಧವಾಗಿರಲಿ ಅಥವಾ ವೈವಾಹಿಕ ಜೀವನವಾಗಿರಲಿ, ಅಲ್ಲಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಯಾಕೆಂದರೆ ಯಶಸ್ವಿ ಜೀವನಕ್ಕೆ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಈ ಸೂತ್ರಗಳು ವೈವಾಹಿಕ ಜೀವನ ಯಶಸ್ವಿಗೊಳಿಸಲು ಸಹಕಾರಿ ಆಗಿದೆ. ಅಂತಹ ಐದು ಸೂತ್ರಗಳ ಬಗ್ಗೆ ತಿಳಿಯಿರಿ.
ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ತಕ್ಷಣವೇ ಪರಿಹರಿಸಿಕೊಳ್ಳುವುದು ಅವಶ್ಯಕ. ಅದಲ್ಲದೇ, ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಈ ಕೆಲವು ವಿಷಯಗಳಿಗೆ ಹೆಚ್ಚು ಗಮನ ಹರಿಸಿದರೆ ಇಬ್ಬರ ನಡುವಿನ ಸಂಬಂಧವು ಇನ್ನಷ್ಟು ಗಟ್ಟಿಯಾಗುತ್ತವೆ.
ನಿಮ್ಮ ಸಂಗಾತಿಗೆ ಸಾಕಷ್ಟು ಸಮಯವನ್ನು ನೀಡಿ: ಪ್ರತಿ ಸಂಬಂಧವು ಬಲಪಡಿಸುವ ಅಸ್ತ್ರವೇ ಈ ಸಮಯ. ಒಬ್ಬರಿಗೊಬ್ಬರು ಸಮಯ ನೀಡುವುದು ಸಂಬಂಧವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಉದ್ಯೋಗಸ್ಥ ದಂಪತಿಗಳಿಗೆ ಪರಸ್ಪರ ಒಟ್ಟಿಗೆ ಕಳೆಯಲು ಸಮಯವೇ ಇಲ್ಲ. ಇದರಿಂದ ಪತಿ-ಪತ್ನಿಯರ ನಡುವಿನ ಅಂತರವು ಹೆಚ್ಚಾಗುತ್ತದೆ. ಹೀಗಾಗಿಯೇ ಸಂಬಂಧವು ಮತ್ತಷ್ಟು ದುರ್ಬಲಗೊಳ್ಳುತ್ತದೆ. ಈ ಕಾರಣದಿಂದ ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಲು ಪ್ರಯತ್ನಿಸಿ.
ಸಂಭಾಷಣೆ ಅಗತ್ಯ: ದಂಪತಿಗಳಿಬ್ಬರೂ ಜಗಳವಾಡುವ ಸಮಯದಲ್ಲಿ ಒಬ್ಬರು ಮೌನವಾಗಿರುವುದು ಅತ್ಯವಶ್ಯಕ. ಇಲ್ಲದಿದ್ದರೆ ಮಾತಿಗೆ ಮಾತು ಬೆಳೆದು ವೈವಾಹಿಕ ಜೀವನವು ಹಾಳಾಗುತ್ತದೆ. ಅದಲ್ಲದೇ, ನಿಮ್ಮ ಸಂಗಾತಿಯೂ ಏನಾದರೂ ಕೋಪಮಾಡಿಕೊಂಡಿದ್ದರೆ ಪ್ರೀತಿಯ ಸಂಭಾಷಣೆಯ ಮೂಲಕ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಾನೇಕೆ ಮಾತನಾಡಲಿ ಎನ್ನುವ ಅಹಂ ಭಾವವು ಬಂದರೆ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತವೆ.ಹೀಗಾಗಿ ಸಂಭಾಷಣೆಯಿಂದ ಎಲ್ಲವನ್ನು ಬಗೆಹರಿಸಿಕೊಳ್ಳುವುದು ಮುಖ್ಯ.
ತಪ್ಪನ್ನು ಒಪ್ಪಿಕೊಳ್ಳುವ ಗುಣವಿರಲಿ : ತಪ್ಪು ಯಾರಿಂದ ಆಗಲ್ಲ ಹೇಳಿ, ಕೆಲವೊಮ್ಮೆ ತಿಳಿದೋ ತಿಳಿಯದೇನೋ ತಪ್ಪುಗಳಾಗುತ್ತದೆ. ಇದರಿಂದಲೇ ಎಷ್ಟೋ ಸಲ ಸಂಗಾತಿಯ ಮನಸ್ಸಿಗೆ ನೋವಾಗುತ್ತದೆ. ಈ ಸಂದರ್ಭದಲ್ಲಿ ಸಂಗಾತಿಯ ಬಳಿ ಕ್ಷಮಿಸಿ ಎಂದು ಹೇಳಲು ಹಿಂಜರಿಯಬಾರದು. ಕ್ಷಮಿಸಿ ಎಂದು ಕೇಳುವುದರಿಂದ ಸಂಬಂಧದಲ್ಲಿ ಬಿರುಕು ಮೂಡುವುದಿಲ್ಲ. ಸಂಗಾತಿಗಳಿಬ್ಬರೂ ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಿದರೆ ದಾಂಪತ್ಯ ಜೀವನವು ಸುಖಕರವಾಗಿರಲು ಸಾಧ್ಯವಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






