ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಕೊಟ್ಟ ಬಾಸ್ ಖ್ಯಾತಿಯ ದಿವ್ಯಾ ಸುರೇಶ್: ಏನದು ಸಮಾಚಾರ!?

ತ್ರಿಪುರ ಸುಂದರಿ'ಯಾಗಿ ಕಿರುತೆರೆ ವೀಕ್ಷಕರ ಮನ ಸೆಳೆದ ದಿವ್ಯಾ ಸುರೇಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. 'ತ್ರಿಪುರ ಸುಂದರಿ' ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ದಿವ್ಯಾ ಸುರೇಶ್ ಇದೀಗ ಹೊಚ್ಚ ಹೊಸ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಬಿಗ್ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶಾರದೆ ಎಂಬ ಟೈಟಲ್ನೊಂದಿಗೆ ಸೀರಿಯಲ್ ಬರ್ತಿದೆ. ಇದೊಂದು ರಿಮೇಕ್ ಸ್ಟೋರಿ. ತಮಿಳಿನಲ್ಲಿ ಸೂಪರ್ ಹಿಟ್ ಆಗಿರೋ ಚೆಲ್ಲಮ್ಮ ಎಂಬ ಸೀರಿಯಲ್ನ ಕನ್ನಡದಲ್ಲಿ ಶಾರದೆ ರೂಪದಲ್ಲಿ ತರಲಾಗ್ತಿದೆ. ಅಮ್ಮ-ಮಗಳ ಬಾಂಧವ್ಯದ ಬೇಸುಗೆ ಸ್ಟೋರಿ ಹೈಲೈಟ್. ಇನ್ನೂ, ಮಗುವಿನ ಪಾತ್ರದಲ್ಲಿ ಚುಕ್ಕಿತಾರೆ ಖ್ಯಾತಿಯ ಬಾಲ ನಟಿ ಸ್ಪೂರ್ತಿ ಸುನೀಲ್ ಅಭಿನಯಿಸುತ್ತಿದ್ದಾಳೆ
ನಾಯಕಿ ಶಾರದಾ ಪಾತ್ರವನ್ನ ನಟಿ ಚೈತ್ರಾ ಸಕ್ಕರೆ ನಿರ್ವಹಿಸಲಿದ್ದಾರೆ. ಇವರು ಕನ್ನಡದವ್ರೇ ಅದರೂ ಹೆಚ್ಚು ತಮಿಳು, ತೆಲುಗಿನಲ್ಲಿ ಜನಪ್ರಿಯತೆ ಪಡೆದಿರೋ ನಟಿ. ಕನ್ನಡದಲ್ಲೂ ಅಭಿನಯಿಸಿದ್ದಾರೆ. ಈ ಹಿಂದೆ ದಿವ್ಯ ಸುರೇಶ್ ಸೀರಿಯಲ್ ಮಾಡೋಕೆ ಸಜ್ಜಾಗಿದ್ದಾರೆ ಎಂಬ ಮಾಹಿತಿ ನೀಡಿದ್ವಿ.
ಬಿಗ್ಬಾಸ್ ಬೆಡಗಿ ದಿವ್ಯಾ ಸುರೇಶ್ ಅಭಿನಯಿಸ್ತಿರೋ ಧಾರಾವಾಹಿ ಇದೇ ಶಾರದೆ. ಇದರಲ್ಲಿ ಪ್ರಮುಖ ಪಾತ್ರವೊಂದಕ್ಕೆ ನಟಿ ದಿವ್ಯಾ ಸುರೇಶ್ ಬಣ್ಣ ಹಚ್ಚಿದ್ದಾರೆ ನಟಿ. ಇನ್ನೂ ಅಗ್ನಿಸಾಕ್ಷಿ ಖ್ಯಾತಿಯ ನಟ ರಾಜೇಶ್ ಧ್ರುವ ಕೂಡ ಶಾರದೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಿನಲ್ಲಿ ಹಲವು ಜನಪ್ರಿಯ ಕಲಾವಿದರ ತಂಡದ ಜೊತೆಗೆ ಶಾರದೆ ಬರ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






