ಅಯ್ಯೋ… ಮಸಾಲೆ ದೋಸೆ ತಿಂದ ಮೂರು ವರ್ಷದ ಬಾಲಕಿ ಸಾವು!

ತ್ರಿಶೂರ್: ಮಸಾಲೆ ದೋಸೆ ತಿಂದ ನಂತರ ಅಸ್ವಸ್ಥತೆ ಅನುಭವಿಸಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಹೌದು ಕಲ್ಲೂಕರನ್ ಹೆನ್ರಿ ಅವರ ಪುತ್ರಿಯಾಗಿರುವ ಒಲಿವಿಯಾ ಸಾವಿನ ಹಾದಿ ತುಳಿದಿದ್ದಾಳೆ. ಬಾಲಕಿಯ ತಂದೆ ಹೆನ್ರಿ ವಿದೇಶದಲ್ಲಿದ್ದರು. ವಿದೇಶದಿಂದ ನೆಡುಂಬಸ್ಸೇರಿಗೆ ಆಗಮಿಸಿದ್ದ ಹೆನ್ರಿಯನ್ನು ಕರೆದುಕೊಂಡು ಬರಲು ಒಲಿವಿಯಾ ಕುಟುಂಬ ಸದಸ್ಯರೊಂದಿಗೆ ಹೋಗಿದ್ದಳು. ಮನೆಗೆ ಹೋಗುವಾಗ, ಹೆನ್ರಿ, ಅವರ ಪತ್ನಿ, ತಾಯಿ ಮತ್ತು ಒಲಿವಿಯಾ ಅಂಗಮಾಲಿಯ ಹೋಟೆಲ್ನಲ್ಲಿ ಊಟ ಮಾಡಿದರು.
ಬಾಲಕಿ ಮಸಾಲೆದೋಸೆ ತಿಂದಿದ್ದಳು. ಇದಾದ ಬಳಿಕ ಖುಷಿಯಿಂದ ಎಲ್ಲರೂ ಮನೆಗೆ ಬರುತ್ತಿದ್ದಂತೆಯೇ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಆಕೆಯನ್ನು ಒಲ್ಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಒಲಿವಿಯಾಗೆ ಇಂಜೆಕ್ಷನ್ ನೀಡಿದರು. ವೈದ್ಯರು ಕೂಡ ಇದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸದೇ ಮನೆಗೆ ಕಳುಹಿಸಿದರು.
ಆಸ್ಪತ್ರೆಯಿಂದ ವಾಪಸಾದ ಬಳಿಕ ಬಾಲಕಿಗೆ ಮತ್ತಷ್ಟು ಸಮಸ್ಯೆ ಉಂಟಾಯಿತು. ಮರುದಿನ ಮಗುವಿನ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟಿತು. ಮಗುವನ್ನು ಪುತ್ತುಕ್ಕಾಡ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿಯೇ ಬಾಲಕಿ ಸಾವನ್ನಪ್ಪಿದಳು. ಮಗುವಿನ ಜೊತೆಗೆ, ಪೋಷಕರು ಮತ್ತು ಹೆನ್ರಿಯ ತಾಯಿ ಮಸಾಲೆ ದೋಸೆ ತಿಂದಿದ್ದರು.
ಅವರು ಕೂಡ ದೈಹಿಕವಾಗಿ ಅಸ್ವಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ, ಸಾವಿಗೆ ಮಸಾಲೆ ದೋಸೆ ಕಾರಣ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪುದುಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುತ್ತುಕ್ಕಾಡ್ ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸರು ಮತ್ತು ಆರೋಗ್ಯ ಇಲಾಖೆ ತನಿಖೆ ಆರಂಭಿಸಿವೆ.
ನಿಮ್ಮ ಪ್ರತಿಕ್ರಿಯೆ ಏನು?






