ಆಚೆ ಬಂದೈತಲ್ಲಾ ಇನ್ಮುಂದೆ ನೋಡ್ಕೋತೀನಿ: ರಜತ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಜನವರಿ 27, 2025 - 20:01
 0  32
ಆಚೆ ಬಂದೈತಲ್ಲಾ ಇನ್ಮುಂದೆ ನೋಡ್ಕೋತೀನಿ: ರಜತ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಬಿಗ್​ಬಾಸ್ ಕನ್ನಡ ಸೀಸನ್ 11 ರ ಫಿನಾಲೆ ಮುಕ್ತಾಯವಾಗಿದೆ. ಸೀಸನ್ 11ರ ವಿನ್ನರ್ ಆಗಿ ಹನುಮಂತ ಅವರು ಹೊರ ಹೊಮ್ಮಿದ್ದಾರೆ. ಹನುಮಂತು ಮತ್ತು ರಜತ್ ಅವರುಗಳು ಬಿಗ್​ಬಾಸ್ ಸೀಸನ್ ಪ್ರಾರಂಭವಾದಾಗ ಮನೆ ಸೇರಿದವರಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು. ಬಿಗ್​ಬಾಸ್ ಆರಂಭವಾದ ಮೂರು ವಾರಗಳ ಬಳಿಕ ಹನುಮಂತು ಮನೆಗೆ ಎಂಟ್ರಿ ಕೊಟ್ಟರು. ಯಾವುದೇ ಮುನ್ಸೂಚನೆ ಇಲ್ಲದೆ ಏಕಾಏಕಿ ಹನುಮಂತನನ್ನು ಶೋಗೆ ಕರೆತರಲಾಯ್ತು. ಜಗದೀಶ್ ಮತ್ತು ರಂಜಿತ್ ಪರಸ್ಪರ ಹೊಡೆದಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಲಾಯ್ತು. ಬರೀ ಜಗಳವೇ ತುಂಬಿದ್ದ ಮನೆಗೆ ಹನುಮಂತನ ಎಂಟ್ರಿ ಆಯ್ತು. ಆ ನಂತರ ಮನೆಯ ವಾತಾವರಣವೇ ಬದಲಾಯ್ತು.

ಬಿಗ್​ಬಾಸ್ ಪ್ರಾರಂಭವಾಗಿ 50 ದಿನದ ಬಳಿಕ ರಜತ್ ಎಂಟ್ರಿ ಆಯ್ತು. ಉಗ್ರಂ ಮಂಜು, ತ್ರಿವಿಕ್ರಮ್ ಅವರನ್ನು ಹೊರತುಪಡಿಸಿದರೆ ಬೇರೆ ಸ್ಪರ್ಧಿಯೇ ಮನೆಯಲ್ಲಿಲ್ಲ ಎಂದುಕೊಳ್ಳುವ ಸಮಯದಲ್ಲಿ ಬಂದ ರಜತ್, ತಮ್ಮ ನೇರಾ-ನೇರಾ ಆಟದ ವೈಖರಿಯಿಂದ ಹಲವರನ್ನು ಮನೆಯಿಂದ ಹೊರಗೆ ಹಾಕಿದರು.

50 ದಿನ ಪೂರೈಸಿದ್ದ ಬಿಗ್‌ಬಾಸ್ ಮನೆಗೆ ಖಡಕ್​ ಆಗಿ ಕಾಲಿಟ್ಟಿದ್ದ ರಜತ್ ಟಾಪ್​ 2 ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದಾರೆ. ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಟಾಪ್​ 3 ಸ್ಥಾನಕ್ಕೆ ಬಂದಿದ್ದ ರಜತ್​ ಸದ್ಯ ವಿನ್ನಿಂಗ್​ ಮೂಡ್​ನಲ್ಲಿದ್ದಾರೆ

ಇದರ ಮಧ್ಯೆ ರಜತ್​ ಬಿಗ್​ಬಾಸ್ ಮನೆಯಲ್ಲಿದ್ದಾಗ ​ಅವರ ಪತ್ನಿ ಅಕ್ಷತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೌದು, ಮಾಜಿ ಗೆಳತಿಯ ಜೊತೆಗಿದ್ದ ರಜತ್‌ ಫೋಟೋಗಳು ವೈರಲ್ ಆಗಿದ್ದು, ಹೀಗಾಗಿ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಅಕ್ಷತಾ ಮೆಸೇಜ್ ಮಾಡಿದ್ರು. ಆದ್ರೆ, ಟ್ರೋಲ್​ ಪೇಜ್​ವೊಂದು ಫೋಟೋ ಡಿಲೀಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡಿತ್ತು. ಇದಾದ ಬಳಿಕ ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಅಕ್ಷತಾ ಹಣ ಟ್ರಾನ್ಸ್‌ಫರ್ ಮಾಡಿದ್ರು. ಹಣ ಹಾಕಿದ ಬಳಿಕವೂ ಬೇರೆ ಟ್ರೋಲ್‌ ಪೇಜ್‌ನಲ್ಲಿ ಫೋಟೋ ವೈರಲ್ ಆಗಿದ್ದವು. ಆಗ ಪತ್ನಿ ಅಕ್ಷತಾ ಅವರು ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಪದೇ ಪದೇ ಫೋಟೋಗಳು ವೈರಲ್​ ಮಾಡ್ತಾ ಇದಿದ್ದರಿಂದ ಪಶ್ಟಿಮ ವಿಭಾಗದ ಠಾಣೆಗೆ ರಜತ್​ ಪತ್ನಿ ಅಕ್ಷತಾ ದೂರು ಕೊಟ್ಟಿದ್ದರು.

ಬಿಗ್​ಬಾಸ್​ ಮನೆಯಿಂದ ರನ್ನರ್ ಅಪ್​ ಆಗಿ ಆಚೆ ಬಂದಿದ್ದ ರಜತ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ರಜತ್​, ಏನು ತೊಂದರೆ ಇಲ್ಲ, ಟ್ರೋಲ್​ ಆಗಲಿ ಬಿಡಿ, ಈಗ ನಾನು ಆಚೆ ಬಂದಿದ್ದೀನಿ ಅಲ್ವಾ ನೋಡಿಕೊಳ್ತೀನಿ ಎಂದು ಖಡಕ್​ ವಾರ್ನಿಂಗ್ ಕೊಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow