ಇಂದಿರಾಗಾಂಧಿಯನ್ನ ನಿತ್ಯವೂ ಟೀಕೆ ಮಾಡ್ತಾರೆ.. ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಕೂರಲ್ಲ- ಸೂಲಿಬೆಲೆ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ!

ಜೂನ್ 21, 2025 - 12:01
 0  11
ಇಂದಿರಾಗಾಂಧಿಯನ್ನ ನಿತ್ಯವೂ ಟೀಕೆ ಮಾಡ್ತಾರೆ.. ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಕೂರಲ್ಲ- ಸೂಲಿಬೆಲೆ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ!

ಬೆಂಗಳೂರು:- ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರದಿಂದ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ದ್ವೇಷ ಭಾಷಣ ಯಾರೇ ಮಾಡಿದ್ರು ಸರ್ಕಾರ ಸುಮ್ಮನೆ ಇರೋದಕ್ಕೆ ಆಗುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರ ನೊಟೀಸ್ ನೀಡಿದ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಯಾರೇ ದ್ವೇಷ ಭಾಷಣ ಮಾಡಿದ್ರು ನೊಟೀಸ್ ಜಾರಿ ಆಗುತ್ತದೆ. ನಾನೇ ದ್ವೇಷ ಭಾಷಣ ಮಾಡಿದ್ರು ನನಗೂ ನೋಟೀಸ್ ಜಾರಿ ಆಗುತ್ತದೆ ಎಂದಿದ್ದಾರೆ. 

ಕಾನೂನು ಬಾಹಿರವಾಗಿ ಯಾರು ನಡೆದುಕೊಳ್ಳಬೇಕು. ಅವರ ಭಾಷಣ ಸರಿಯಿಲ್ಲ. ಅವರು ತಪ್ಪಾಗಿ ಭಾಷಣ ಮಾಡಿದ್ರೆ ನಾವೇನು ಮಾಡೋಣ. ನೆಹರು, ಇಂದಿರಾಗಾಂಧಿಯನ್ನ ನಿತ್ಯವೂ ಸೂಲಿಬೆಲೆ ಟೀಕೆ ಮಾಡ್ತಾರೆ. ದ್ವೇಷ ಭಾಷಣದ ಹೇಳಿಕೆ ಕೊಟ್ಟಾಗ ಕ್ರಮ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ. 

ರಾಹುಲ್ ಗಾಂಧಿಯವರು ಯಾವುದೇ ತಪ್ಪು ಮಾಡದೇ ಹೋದ್ರು, ಕೇಸ್ ಬುಕ್ ಮಾಡಿ ಅವರ ಎಂಪಿ ಸ್ಥಾನ ಕಿತ್ತುಕೊಂಡಿದ್ದರು. ರಾಹುಲ್ ಅವರೇನು ದ್ವೇಷ ಭಾಷಣ ಮಾಡಿದ್ರಾ? ಆದರೂ ಅವರ ಮೇಲೆ ಕ್ರಮ ಮಾಡಿದ್ರಿ. ಯಾರು ದ್ವೇಷ ಭಾಷಣ ಮಾಡಬಾರದು. ಸಾಮರಸ್ಯವಾಗಿ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow