ಇದು ನಂಬಿ ಕೆಟ್ಟಿದ್ದೋ!? OR ಮಾಜಿ ತಂಡಕ್ಕೆ ಕೊಡುಗೆಯೋ? - ಇಶಾನ್ ಕಿಶನ್ ಔಟ್ ಆಗಿದ್ದೇಗೆ?

ಪ್ರಾಮಾಣಿಕತೆಯಿಂದ ಕ್ರಿಕೆಟ್ ಆಡುವುದಕ್ಕೆ ಹೆಸರುವಾಸಿಯಾದವರು ಸಚಿನ್ ತೆಂಡೂಲ್ಕರ್. ಸಚಿನ್ ಔಟ್ ಎಂದು ಭಾವಿಸಿದರೆ, ಅವರು ಅಂಪೈರ್ ನಿರ್ಧಾರಕ್ಕಾಗಿ ಕಾಯುತ್ತಿರಲಿಲ್ಲ. ಎದುರಾಳಿ ತಂಡ ಮೇಲ್ಮನವಿ ಸಲ್ಲಿಸಲಿ ಅಥವಾ ನೀಡದಿರಲಿ, ಅಂಪೈರ್ ಔಟ್ ನೀಡಲಿ ಅಥವಾ ನೀಡದಿರಲಿ, ಸಚಿನ್ ಸ್ವತಃ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರು. ಆಸ್ಟ್ರೇಲಿಯಾದ ಆಡಮ್ ಗಿಲ್ಕ್ರಿಸ್ಟ್ನ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ.
ಐಪಿಎಲ್ 2025ರ 41ನೇ ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ಒಪ್ಪಿಸಿದ ರೀತಿ ಚರ್ಚೆಗೀಡಾಗಿದೆ. ದೀಪಕ್ ಚಹರ್ ಎಸೆದ ಮೂರನೇ ಓವರ್ನ ಮೊದಲ ಎಸೆತವು ಲೆಗ್ ಸೈಡ್ ಮೂಲಕ ವಿಕೆಟ್ ಕೀಪರ್ ಕೈ ಸೇರಿತು. ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಇಶಾನ್ ಕಿಶನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಆದರೆ ಆ ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್ಗೆ ತಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಇದಾಗ್ಯೂ ಇಶಾನ್ ಕಿಶನ್ ಪ್ರಮಾಣಿಕನಾಗಿ ಕ್ರೀಡಾ ಸ್ಪೂರ್ತಿ ಮೆರೆದರೆ ಎಂದು ಕೇಳಿದರೆ, ಇಲ್ಲ ಎಂಬ ಉತ್ತರ ನೀಡಬಹುದು. ಏಕೆಂದರೆ ಇಶಾನ್ ಕಿಶನ್ ಚೆಂಡು ಬ್ಯಾಟ್ಗೆ ತಗುಲಿದೆ ಎಂದು ಭಾವಿಸಿ ಮೈದಾನ ತೊರೆಯಲು ಮುಂದಾಗಿದ್ದರು. ಆದರೆ ಕ್ಷಣಾರ್ಧದಲ್ಲಿ ಅವರಿಗೆ ಅಂಪೈರ್ ಔಟ್ ನೀಡಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಮತ್ತೆ ಕ್ರೀಸ್ಗೆ ಹಿಂತಿರುಗಿದ್ದರು
ಆದರೆ ಅತ್ತ ಅಂಪೈರ್ ಔಟ್ ನೀಡಲು ಮುಂದಾಗಿದ್ದರಿಂದ ದೀಪಕ್ ಚಹರ್ ಅಪೀಲ್ ಮಾಡಿದ್ದಾರೆ. ಹೀಗಾಗಿ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ವೇಳೆ ಡಿಆರ್ಎಸ್ ರಿವ್ಯೂ ತೆಗೆದುಕೊಳ್ಳುವ ಅವಕಾಶವಿದ್ದರೂ, ಇಶಾನ್ ಕಿಶನ್ ಎಡವಟ್ಟು ಮಾಡಿಕೊಂಡರು.
ಚೆಂಡು ಬ್ಯಾಟ್ಗೆ ತಗುಲಿದೆ ಎಂಬ ಗುಂಗಿನಲ್ಲಿದ್ದ ಇಶಾನ್ ಕಿಶನ್ ರಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್ ಕಡೆ ಹಿಂತಿರುಗಿದ್ದಾರೆ. ಅಂದರೆ ಇಶಾನ್ ಕಿಶನ್ ಅಂಪೈರ್ ನಿರ್ಧಾರವನ್ನು ನಂಬಿ ತನ್ನ ವಿಕೆಟ್ ಒಪ್ಪಿಸಿರುವುದು ಸ್ಪಷ್ಟ. ಅದರಲ್ಲೂ ಅಂಪೈರ್ ತೀರ್ಪಿಗೆ ಕಾಯದೇ ಮೊದಲ ಪೆವಿಲಿಯನ್ ಕಡೆ ಹೆಜ್ಜೆಯಾಗಲು ಮುಂದಾಗಿ ದೊಡ್ಡ ತಪ್ಪು ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






