Akshaya Tritiya: ಮನೆಗೆ ಲಕ್ಷ್ಮಿ ದೇವಿ ಬರಲು ಅಕ್ಷಯ ತೃತೀಯದ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಗಿಡಿ..!

ಎಪ್ರಿಲ್ 28, 2025 - 07:03
 0  8
Akshaya Tritiya: ಮನೆಗೆ ಲಕ್ಷ್ಮಿ ದೇವಿ ಬರಲು ಅಕ್ಷಯ ತೃತೀಯದ ಮೊದಲು ಮನೆಯಿಂದ ಈ ವಸ್ತುಗಳನ್ನು ಹೊರಗಿಡಿ..!

 

 

 

 

 

 

ಅಕ್ಷಯ ತೃತೀಯ ಹಬ್ಬವು ನಿಮ್ಮ ಧನ-ಸಂಪತ್ತನ್ನು ಹೆಚ್ಚಿಸುವ ವಿಶೇಷ ದಿನವಾಗಿದೆ. ಈ ದಿನ ಮಾಡುವ ಪೂಜೆ, ದಾನ ಧರ್ಮ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುವುದು ಎಂದು ಹೇಳಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯೊಂದಿಗೆ ವಿಷ್ಣುವನ್ನು ಪೂಜಿಸುವುದರಿಂದ ಸುಖ-ಸಮೃದ್ಧಿ ನೆಲೆಸುವುದು. ಜೊತೆಗೆ ಈ ದಿನ ಚಿನ್ನ-ಬೆಳ್ಳಿಯನ್ನು ಖರೀದಿಸುವುದು ಶುಭ ಎಂದು ಹೇಳಲಾಗುತ್ತದೆ.

ಹಾಗೆ ಅಕ್ಷಯ ತೃತೀಯಕ್ಕೂ ಮೊದಲು ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ. ಇಲ್ಲದಿದ್ದರೆ ಲಕ್ಷ್ಮಿ ದೇವಿಯು ನಿಮ್ಮ ಮನೆಯಿಂದ ಹಿಂತಿರುಗುತ್ತಾಳೆ.ಜೊತೆಗೆ ಲಕ್ಷ್ಮಿ ದೇವಿಯಿರುವ ಸ್ಥಳವನ್ನು ಶುಚಿತ್ವದಿಂದ ನೋಡಿಕೊಳ್ಳಿ. ಏಕೆಂದರೆ ಲಕ್ಷ್ಮಿ ದೇವಿಯು ಶುದ್ಧ ಸ್ಥಳದಲ್ಲಿ ಮಾತ್ರ ವಾಸಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಯಾವ ವಸ್ತುಗಳನ್ನು ತೆಗೆದುಹಾಕಬೇಕು ಎಂದು ನೋಡೋಣ..

ಮುರಿದ ಪೊರಕೆ 
ಪೊರಕೆಯನ್ನು ಲಕ್ಷ್ಮಿ ದೇವಿಯ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಮುರಿದ ಪೊರಕೆ ಇದ್ದರೆ ಅದನ್ನು ಗೌರವದಿಂದ ಹೊರಗೆ ಎಸೆಯಿರಿ. ಮನೆಯಲ್ಲಿ ಮುರಿದ ಪೊರಕೆಯನ್ನು ಇಟ್ಟುಕೊಳ್ಳುವುದರಿಂದ ಹಣದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಮುರಿದ ಪೊರಕೆ ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರಬಹುದು.

ಕೊಳಕು ಬಟ್ಟೆಗಳು
ನಿಮ್ಮ ಮನೆಯಲ್ಲಿ ಹರಿದ ಬಟ್ಟೆಗಳಿದ್ದರೆ ಅಕ್ಷಯ ತೃತೀಯಕ್ಕೂ ಮುನ್ನ ಮನೆಯಿಂದ ಹೊರಗೆ ಎಸೆಯಿರಿ. ಕೊಳಕು ಬಟ್ಟೆಗಳನ್ನು ಅಲ್ಲಿ ಇಟ್ಟರೆ ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ. ಕೊಳಕಾದ ಹರಿದ ಬಟ್ಟೆಗಳಿಂದ ಮನೆಯಲ್ಲಿ ಬಡತನ ಉಂಟಾಗಬಹುದು. 

ಮುರಿದ ವಸ್ತುಗಳು
ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರಬೇಕೆಂದು ನೀವು ಬಯಸಿದರೆ, ಅಕ್ಷಯ ತೃತೀಯಕ್ಕೂ ಮೊದಲು ಮನೆಯಿಂದ ಮುರಿದ ವಸ್ತುಗಳನ್ನು ತೆಗೆದುಹಾಕಿ. ಮುರಿದ ಗಡಿಯಾರಗಳು, ಮುರಿದ ಪಾತ್ರೆಗಳು ಮತ್ತು ಹಾನಿಗೊಳಗಾದ ಯಾವುದೇ ವಸ್ತುವನ್ನು ಮನೆಯಿಂದ ಹೊರಗೆ ಎಸೆಯಬೇಕು. ಇಲ್ಲದಿದ್ದರೆ ನಿಂತುಹೋದ ಗಡಿಯಾರವನ್ನು ದುರಸ್ತಿ ಮಾಡಿಸಿ.

ಛಿದ್ರಗೊಂಡ ವಿಗ್ರಹಗಳು 
ಮನೆ ಅಥವಾ ದೇವಸ್ಥಾನದಲ್ಲಿ ದೇವರು ಮತ್ತು ದೇವತೆಗಳ ಮುರಿದ ವಿಗ್ರಹವಿದ್ದರೆ, ಅಕ್ಷಯ ತೃತೀಯಕ್ಕೆ ಮೊದಲು ಅದನ್ನು ತೆಗೆದುಹಾಕಿ. ಈ ವಿಗ್ರಹಗಳನ್ನು ನದಿ ಅಥವಾ ಶುದ್ಧವಾದ ಕೊಳದಲ್ಲಿ ಮುಳುಗಿಸಿ. ದೇವರು ಮತ್ತು ದೇವತೆಗಳ ಮುರಿದ ವಿಗ್ರಹಗಳನ್ನು ಮನೆಯಲ್ಲಿ ಎಂದಿಗೂ ಇಡಬಾರದು.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow