ಇನ್ಮೇಲೆ ಯಾರೂ ಹಾಡು ಹಾಡಿಸಂಗಿಲ್ಲ, ಮ್ಯೂಸಿಕಲ್ ನೈಟ್ಸ್ ಮಾಡಂಗಿಲ್ಲ! ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್

ಮೇ 5, 2025 - 16:01
 0  10
ಇನ್ಮೇಲೆ ಯಾರೂ ಹಾಡು ಹಾಡಿಸಂಗಿಲ್ಲ, ಮ್ಯೂಸಿಕಲ್ ನೈಟ್ಸ್ ಮಾಡಂಗಿಲ್ಲ! ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್

ಖ್ಯಾತ ಗಾಯಕ ಸೋನು ನಿಗಮ್ ಕನ್ನಡ ಹಾಡುಗಳ ಬಗ್ಗೆ, ಕರ್ನಾಟಕದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಲೇ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದು ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಅಲ್ಲದೇ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವಲಹಳ್ಳಿ ಪೊಲೀಸರು ಸೋನು ನಿಗಮ್​ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸೋನು ನಿಗಮ್ ವಿರುದ್ದ ಕ್ರಮಕ್ಕೆ ಮುಂದಾದ ಫಿಲ್ಮ್ ಚೇಂಬರ್ ಸಂಗೀತ ಸಂಯೋಜಕರ ಸಂಘದ ಜೊತೆ ಸಭೆ ಮಾಡಿದೆ. ಧರ್ಮ ವಿಶ್, ಶಮಿತಾ ಮಲ್ನಾಡ್ ವಾಣಿಜ್ಯ ಮಂಡಳಿ ಸಭೆಗೆ‌ ಹಾಜರಾಗಿದ್ದಾರೆ. ಸಾಧು ಕೋಕಿಲ,ಗುರು ಕಿರಣ್, ಹರಿಕೃಷ್ಣ, ಅಜನೀಶ್ ಲೋಕನಾಥ್, ಅರ್ಜುನ್ ಜನ್ಯ, ರವಿ ಬಸ್ರೂರ್ ಇಂದಿನ ಸಭೆಗೆ ಗೈರಾಗಿದ್ದಾರೆ.

ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಹೇಳಿಕೆ ನೀಡಿದ್ದು, ಸೋನು ನಿಗಮ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಸೋನು ನಿಗಂ ಕ್ಷಮೆ ಕೇಳ್ತಾರೆ ಅಂತ ನಾವು ಭಾವಿಸಿದ್ದೆವು. ಇದುವರೆಗೂ ಸೋನು ನಿಗಮ್ ಕ್ಷಮೆ ಕೇಳಿಲ್ಲ ಎಂದಿದ್ದಾರೆ.

ನಾವು ಈ ಕ್ಷಣದಿಂದಲೇ ಸೋನು ನಿಗಮ್ ಅವ್ರನ್ನ ಕನ್ನಡದ ಚಿತ್ರರಂಗದಿಂದ ದೂರ ಇಡುವ ಕೆಲಸ ಮಾಡುತ್ತೇವೆ. ನಾವು ಅವರಿಗೆ ಅಸಹಕಾರ ತೋರುವ ಮೂಲಕ ಚಿತ್ರರಂಗದಿಂದ ದೂರ ಇಡುತ್ತೇವೆ ಎಂದಿದ್ದಾರೆ.

ಸಂಗೀತ ನಿರ್ದೇಶಕ ಧರ್ಮ‌ವಿಶ್ ಹೇಳಿಕೆ ಮಾತನಾಡಿ, ಸಂಗಿತ ಸಂಯೋಜಕರ ಪ್ರತಿನಿಧಿಯಾಗಿ ನಾನು ಬಂದಿದ್ದೀನಿ. ನಾವು ಎಲ್ಲಾ ಸಂಗೀತ ನಿರ್ದೇಶಕರ ಜೊತೆ ಮಾತಾಡಿದ್ದೀವಿ. ನಾವೆಲ್ಲ ಅವ್ರಿಗೆ ಅಸಹಕಾರ ತೋರೊದಕ್ಕೆ ನಿರ್ಧಾರ ಮಾಡಿದ್ದೀವಿ. ನಾವು ಮಾತ್ರ ಅಲ್ಲ ಆಡಿಯೋ ಕಂಪನಿಗಳು ನಮಗೆ ಸಪೋರ್ಟ್ ಮಾಡಬೇಕು. ಸಂಗೀತ ನಿರ್ದೇಶಕರೆಲ್ಲ ಅಸಹಕಾರ ತೋರೊದಕ್ಕೆ ನಿರ್ಧಾರ ಮಾಡಿದ್ದೀವಿ ಎಂದಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow