ಕಾಲ್ತುಳಿತ ಕೇಸ್: ತೆಲಂಗಾಣ ಸಿಎಂ ಭೇಟಿ ಮಾಡಿದ್ದೇಕೆ ಅಲ್ಲು ಅರ್ಜುನ್?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ ಯಾಕೋ ಟೈಮ್ ಸರಿ ಇಲ್ಲ ಅನ್ಸತ್ತೆ ಮರ್ರೆ. ಪುಷ್ಪ 2 ಭರ್ಜರಿ ಯಶಸ್ಸು ಗಳಿಸಿದರೂ ಆ ಖುಷಿ ಸಂಭ್ರಮ ಮಾಡೋ ಕಾಲ ಅರ್ಜುನ್ ಗೆ ಕೂಡಿ ಬರುತ್ತಿಲ್ಲ.
ಏಕೆಂದರೆ ಅದೊಂದು ಸಾವು ಅಲ್ಲು ಅರ್ಜುನ್ ರನ್ನು ಚಿಂತೆಗೆ ನೂಕಿದೆ. ಎಸ್ ಇದೀಗ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಇಂದು ಅಲ್ಲು ಅರವಿಂದ್ ಭೇಟಿಯಾಗಿದ್ದಾರೆ. ‘ಪುಷ್ಪ 2’ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಸಿಎಂ ರೇವಂತ್ ರೆಡ್ಡಿರನ್ನು ಅಲ್ಲು ಅರವಿಂದ್ ಭೇಟಿ ಮಾಡಿದ್ದಾರೆ.
ಪುಷ್ಪ 2’ ಪ್ರೀಮಿಯರ್ ವೇಳೆ, ಮಹಿಳೆ ಸಾವನ್ನಪ್ಪಲು ಅಲ್ಲು ಅರ್ಜುನ್ ಕಾರಣ ಎಂದು ರೇವಂತ್ ರೆಡ್ಡಿ ಕೆಂಡ ಕಾರಿದ್ದರು. ಈ ಹಿನ್ನೆಲೆ ಅಲ್ಲು ಅರವಿಂದ್ ಜೊತೆಯಾಗಿ ನಟರಾದ ವೆಂಕಟೇಶ್, ನಿತಿನ್, ನಾಗಾರ್ಜುನ, ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಸಾಥ್ ನೀಡಿದ್ದಾರೆ. ರೇವಂತ್ ರೆಡ್ಡಿರನ್ನು ಭೇಟಿಯಾಗಿ ರಾಜಿ ಆಗಲು ಮಾತುಕತೆ ನಡೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






