ಹುಡುಗ್ರೆ ಹುಷಾರ್! ಸಿಂಗಲ್ ಅಂತ ಸಿಕ್ಕ-ಸಿಕ್ಕವರಿಗೆಲ್ಲಾ ಪ್ರಪೋಸ್ ಮಾಡೋ ಮುನ್ನ ಈ ಸ್ಟೋರಿ ನೋಡಿ: ಈಕೆ ಐನಾತಿ ಗುರು!

ಡಿಸೆಂಬರ್ 26, 2024 - 21:03
 0  12
ಹುಡುಗ್ರೆ ಹುಷಾರ್! ಸಿಂಗಲ್ ಅಂತ ಸಿಕ್ಕ-ಸಿಕ್ಕವರಿಗೆಲ್ಲಾ ಪ್ರಪೋಸ್ ಮಾಡೋ ಮುನ್ನ ಈ ಸ್ಟೋರಿ ನೋಡಿ: ಈಕೆ ಐನಾತಿ ಗುರು!

ಉತ್ತರ:- ಹುಡುಗ್ರೆ ಹುಷಾರ್ ಆಗಿರ್ರಪ್ಪ. ಸಿಂಗಲ್ ಅಂತ ಸಿಕ್ಕ-ಸಿಕ್ಕವರಿಗೆಲ್ಲಾ ಪ್ರಪೋಸ್ ಮಾಡೋ ಮುನ್ನ ನೀವು ಈ ಸ್ಟೋರಿ ನೋಡಿಬಿಡಿ.

ಉತ್ತರ ಪ್ರದೇಶದ ಪೊಲೀಸರ ಕಾರ್ಯಚರಣೆಯಲ್ಲಿ ಒಂದು ಖತರ್ನಾಕ್ ಕೇಸ್ ಬೆಳಕಿಗೆ ಬಂದಿದೆ.ಮದುವೆಯ ಹೆಸರಿನಲ್ಲಿ ಒಂಟಿ ಪುರುಷರನ್ನು ವಂಚಿಸಿ ನಂತರ ಅವರ ಮನೆಗಳಿಂದ ನಗದು ಮತ್ತು ಚಿನ್ನಾಭರಣ ದೋಚುವ ದಂಧೆ ನಡೆಸುತ್ತಿದ್ದ ಗುಂಪೊಂದು ಸಿಕ್ಕಿ ಬಿದ್ದಿದೆ. 

ಒಂಟಿ ಪುರುಷರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ ಯುವತಿ ಪೂನಂ ಈಗಾಗಲೇ 6 ಮದುವೆಯಾಗಿದ್ದು, ಇದೀಗ ಏಳನೇ ಮದುವೆಯ ವೇಳೆ ಸಿಕ್ಕಿ ಬಿದ್ದಿದ್ದಾಳೆ. ಈ ಕಿಲಾಡಿ ಯುವತಿಯ ಹಿಂದೆ ದೊಡ್ಡ ಗ್ಯಾಂಗ್ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಉತ್ತರ ಪ್ರದೇಶದ ಬಂದಾ ಮೂಲದ ಪೂನಂ ವಧುವಾಗಿ, ಸಂಜನಾ ಗುಪ್ತಾ ತಾಯಿಯಾಗಿ, ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಅಳಿಯಂದಿರಾಗಿ ನಾಲ್ವರು ಸೇರಿ ಗ್ಯಾಂಗ್ ಕಟ್ಟಿಕೊಂಡಿದ್ದರು. ಅವರಲ್ಲಿ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬವರು ಶ್ರೀಮಂತ ವ್ಯಕ್ತಿಗಳನ್ನು ಅಂದರೆ ಮದುವೆಯಾಗಲು ಹುಡುಗಿ ಹುಡುಕುತ್ತಿರುವ ಪುರುಷರನ್ನು ತಮ್ಮತ್ತ ಸೆಳೆಯುತ್ತಿದ್ದರು.

ಸುಂದರ ಹುಡುಗಿಯನ್ನು ತೋರಿಸುತ್ತೇವೆ ಎಂದು ಹೇಳಿ ತಮ್ಮ ಗ್ಯಾಂಗ್​ನಲ್ಲಿದ್ದ ಪೂನಂನನ್ನು ಪರಿಚಿಯಿಸುತ್ತಿದ್ದರು. ಶ್ರೀಮಂತ ಪುರುಷರನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗುತ್ತಿದ್ದ ಪೂನಂ, ಆತನ ಮನೆಯಲ್ಲಿ ಹಣ, ಬಂಗಾರ ಬೆದರಿಕೆಯೊಡ್ಡಿ ಪರಾರಿಯಾಗುತ್ತಿದ್ದಳು. ಈ ಕ್ರಮದಲ್ಲಿ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಶಂಕರ್ ಉಪಾಧ್ಯಾಯ ಎಂಬುವವರ ಜೊತೆ ಪೂನಂ ಮದುವೆ ಸಿದ್ಧವಾಗಿತ್ತು. ಇದಲ್ಲದೇ 1.5 ಲಕ್ಷ ರೂ. ನೀಡುವಂತೆ ಶಂಕರ್​ಗೆ ಬೆದರಿಕೆ ನೀಡಲಾಗಿತ್ತು. ಅವರಿಂದ ತಪ್ಪಿಸಿಕೊಂಡ ಶಂಕರ್​ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಅಸಲಿ ಕಥೆ ಹೊರಬಿದ್ದಿದೆ.

ಇದೊಂದು ದಂಧೆ ಎಂಬುದು ಪತ್ತೆಯಾಗಿದ್ದು, ಪೂನಂ ಈಗಾಗಲೇ ಆರು ಮದುವೆಯಾಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾಳೆ. ಇದರಿಂದ ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow