ಕಿರಿ ಮಗ ಅಪ್ಪುವಿನ ಬಣ್ಣದ ಬಗ್ಗೆ ರಾಜ್ ಏನ್ ಹೇಳಿದ್ರೂ ಗೊತ್ತಾ!? ಇದು ಮಾದರಿ ನಡೆ ಎಂದ ನೆಟ್ಟಿಗರು!

ಕರುನಾಡು ರತ್ನ ಪುನೀತ್ ರಾಜಕುಮಾರ್ ಅವರ ಜೀವನ ಎಲ್ಲರಿಗೂ ಮಾದರಿ ಆಗಿತ್ತು. ಅವರ ಆದರ್ಶಗಳಿಂದ ಸ್ಪೂರ್ತಿಯಾಗಿ ಜೀವನ ಕಟ್ಟಿಕೊಂಡವರಷ್ಟೋ. ಇವರಿಂದ ಸಹಾಯ ಪಡೆದವರೆಷ್ಟೋ. ಆದರೆ ಇವರ ಸಾವು ನಿಜಕ್ಕೂ ಕರ್ನಾಟಕ ಜನತೆಯನ್ನೇ ಮಂಕು ಬಡಿಸಿತು. ಅಷ್ಟೇ ಅಲ್ಲ ಎಷ್ಟೋ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ದೇವರಲ್ಲಿ ದೇವರಾಗಿರುವ ಅಪ್ಪು ಅವರ ಬಗ್ಗೆ ರಾಜ್ ಗೆ ವಿಶೇಷ ಪ್ರೀತಿ ಇತ್ಇತ್ತ ರಾಜ್ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಕಪ್ಪಗಿದ್ದಾರೆ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ ಅನೇಕರಿಗೆ ಮಾದರಿ ಆಗಿತ್ತು.
ರಾಜ್ಕುಮಾರ್ಗೆ ಮೂವರು ಗಂಡುಮಕ್ಕಳು. ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಈಗಲೂ ನಮ್ಮ ಜೊತೆ ಇದ್ದಾರೆ. ಆದರೆ, ಪುನೀತ್ ಅವರು ನಮ್ಮೊಂದಿಗೆ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಾಜ್ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಅವರು ಕಪ್ಪು ಎಂದು ಕೆಲವರು ಟೀಕಿಸಿದಾಗ ರಾಜ್ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದರು.
ಪುನೀತ್ ತಾಯಿ ಪಾರ್ವತಮ್ಮ ಅವರು ಈ ಬಗ್ಗೆ ಮಾತನಾಡಿದ್ದರು. ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅವನು ಕಪ್ಪಗೆ ಹುಟ್ಟಿದ್ದಾನೆ. ಅವನು ದೇವರು. ಏನು ಅಂದುಕೋಬೇಡ ಎಂದು ರಾಜ್ಕುಮಾರ್ ಸಮಾಧಾನ ಮಾಡಿದ್ದರು’ ಎಂಬುದಾಗಿ ಪಾರ್ವತಮ್ಮ ಹೇಳಿದ್ದರು. ‘ಕಪ್ಪು ಕಸ್ತೂರಿ, ಕೆಂಪು ಕಿಸ್ಬಾಯಿ. ನನಗೇನೋ ಮಗನ ಬಣ್ಣ ಸಾಕಷ್ಟು ಇಷ್ಟ ಆಯ್ತು’ ಎಂಬುದು ರಾಜ್ಕುಮಾರ್ ಮಾತಾಗಿತ್ತು.
ಪುನೀತ್ ರಾಜ್ಕುಮಾರ್ ಓರ್ವ ಅದ್ಭುತ ನಟ. ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾಗಳನ್ನು ಅವರು ಕೊಡುತ್ತಿದ್ದರು. ಅಷ್ಟೇ ಅಲ್ಲ, ಡ್ಯಾನ್ಸ್ನಲ್ಲಿ ಅವರು ಎತ್ತಿದ ಕೈ. ಚಿಕ್ಕ ವಯಸ್ಸಿನಲ್ಲೇ ಪುನೀತ್ ನಟನೆಗೆ ಕಾಲಿಟ್ಟರು. ಇದಕ್ಕೆ ಕಾರಣ ಆಗಿದ್ದು ರಾಜ್ಕುಮಾರ್ ಅವರು. ಪುನೀತ್ ಅವರನ್ನು ಸೆಟ್ಗೆಲ್ಲ ಕರೆದುಕೊಂಡು ಹೋಗುತ್ತಿದ್ದುದು ಇದೇ ರಾಜ್ಕುಮಾರ್.
ರಾಜ್ಕುಮಾರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






