ಚಿನ್ನುಮರಿ ಎಂದು ಕರೆದ ಜಯಂತ್ ಗೆ ವಾರ್ನಿಂಗ್ ಕೊಟ್ಟ ಜಾನು: ಲಕ್ಷ್ಮೀ ನಿವಾಸ ಧಾರಾವಾಹಿ!

ಮಾರ್ಚ್ 7, 2025 - 20:01
 0  13
ಚಿನ್ನುಮರಿ ಎಂದು ಕರೆದ ಜಯಂತ್ ಗೆ ವಾರ್ನಿಂಗ್ ಕೊಟ್ಟ ಜಾನು: ಲಕ್ಷ್ಮೀ ನಿವಾಸ ಧಾರಾವಾಹಿ!

ಜಾಹ್ನವಿಗೆ ಎಲ್ಲಾ ಸತ್ಯಗಳು ತಿಳಿದು ಹೋಗಿದೆ. ತನ್ನ ಗಂಡ ಬಹಳ ಕ್ರೂರ ಮೃಗ ಎನ್ನುವುದು ಕೂಡ ಗೊತ್ತಾಗಿದೆ. ಆದರೆ ಜಯಂತ್ ಬಗ್ಗೆ ಎಲ್ಲಾ ವಿಚಾರಗಳು ಗೊತ್ತಾದ ಮೇಲೂ ಜಯಂತ್ ಜೊತೆ ಜಾಹ್ನವಿ ಗೆ ಮಾತನಾಡಲು ಕೂಡ ಇಷ್ಟ ಆಗುತ್ತಿರಲಿಲ್ಲ. ಆತನ ಜೊತೆ ಎನು ಮಾತನಾಡಲಿ ಎಂದು ಮನದಲ್ಲಿ ಬಹಳಷ್ಟು ಕೋರೆಯುತ್ತಿರುತ್ತದೆ. 

ಹೀಗಾಗಿ ಮನೆಯಲ್ಲಿರುವ ಅಜ್ಜಿಯನ್ನು ತವರು ಮನೆಗೆ ಕಳುಹಿಸಲು ಜಾಹ್ನವಿ ನಿರ್ಧಾರ ಮಾಡಿದ್ದಳು. ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವ ಮಗಳ ಮಾತಿಗೆ ಶ್ರೀನಿವಾಸ್ ಒಪ್ಪಿದ್ದಾರೆ. ಅದರಂತೆ ಜಾಹ್ನವಿ ಮನೆಯಿಂದ ಅಜ್ಜಿಯನ್ನು ಕರೆದುಕೊಂಡು ಹೋಗುವುದು ಎಂದು ನಿರ್ಧರಿಸಲಾಗಿದೆ. ಬಳಿಕ ಶ್ರೀನಿವಾಸ್, ಜಯಂತ್ ಬಳಿ ಬಂದು, ಅಳಿಯಂದಿರೇ, ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕು ಎಂದು ಹೇಳುತ್ತಾರೆ. ಅವರ ಮಾತು ಕೇಳಿ ಜಯಂತ್‌ಗೆ ಒಮ್ಮೆಲೆ ಹೆದರಿಕೆಯಾಗುತ್ತದೆ. ಜಾಹ್ನವಿ ಏನಾದರೂ ಎಲ್ಲ ವಿಷಯ ಅಪ್ಪನ ಬಳಿ ಹೇಳಿರಬಹುದೇ ಎಂದು ಅಂದುಕೊಳ್ಳುತ್ತಿರುವಾಗ, ಅಳಿಯಂದಿರೇ, ಅಮ್ಮನನ್ನು ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ, ಅವರು ಇಲ್ಲಿರುವುದು ಬೇಡ, ಅವರನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಆಗ ಜಯಂತ್ ನಿಟ್ಟುಸಿರು ಬಿಡುತ್ತಾನೆ, ಬಳಿಕ, ಬೇಡ ಎಂದು ಹೇಳಿದರೂ, ನಂತರದಲ್ಲಿ ಅಜ್ಜಿಯನ್ನು ಕರೆದುಕೊಂಡು ಹೋಗಲು ಏರ್ಪಾಟು ಮಾಡುತ್ತಾನೆ. ಅದರಂತೆ ಶ್ರೀನಿವಾಸ್, ಅಮ್ಮನನ್ನು ಮನೆಗೆ ಕರೆದುಕೊಂಡು ಬರುತ್ತಾರೆ

ಅಜ್ಜಿಯನ್ನು ಕಳುಹಿಸಿಕೊಡುತ್ತಲೇ, ಜಯಂತ್ ಜಾಹ್ನವಿ ಬಳಿ ಬರುತ್ತಾನೆ. ಚಿನ್ನುಮರೀ.. ಎಂದು ಕರೆಯುತ್ತಾನೆ. ಅವನ ಧ್ವನಿ ಕೇಳಿದ ಕೂಡಲೇ ಜಾಹ್ನವಿ ಮುಖ ಕೋಪದಿಂದ ಕೆಂಪಾಗುತ್ತದೆ. ನನ್ನನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಾಗೆ ಕರೆಯಬೇಡಿ, ನಿಮ್ಮ ಹತ್ತಿರ ಮಾತನಾಡುವುದು ನನಗೆ ಇಷ್ಟವಿಲ್ಲ, ನೀವು ಈಗಾಗಲೇ ಮಾಡಿರುವ ಕೆಲಸ ನೋಡಿದರೆ, ನಿಮ್ಮ ಜತೆ ಇರಲೂ ಅಸಹ್ಯವಾಗುತ್ತಿದೆ. ನನ್ನ ಹತ್ತಿರ ಬರುವುದು ಮಾತ್ರವಲ್ಲ, ಮುಟ್ಟುವುದೂ ಬೇಡ, ನಿಮ್ಮ ಪ್ರೀತಿ, ಕಾಳಜಿ ಯಾವುದೂ ನಿಜವಲ್ಲ, ನನ್ನನ್ನು ಕರೆದು ಮಾತನಾಡಿಸುವ ಪ್ರಯತ್ನ ಮಾಡಬೇಡಿ ಎಂದು ಜಯಂತ್‌ಗೆ ತೀಕ್ಷ್ಣವಾಗಿ ಎಚ್ಚರಿಕೆ ನೀಡುತ್ತಾಳೆ. ಅದನ್ನು ಕೇಳಿ ಜಯಂತ್ ಥರಗುಟ್ಟಿ ಹೋಗುತ್ತಾನೆ. ಅವನ ಬಾಯಿಂದ ಮಾತೇ ಹೊರಡುವುದಿಲ್ಲ. 

ಇನ್ನೂ ತನ್ನ ವಿರುದ್ಧ ಸಿಡಿದೆದ್ದ ಪ್ರೀತಿಯ ಚಿನ್ನುಮರಿಗೆ ಜಯಂತ್ ಏನು ಮಾಡುತ್ತಾನೋ ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow