ಡಿವೋರ್ಸ್​ ಕೇಳಿದ ದಂಪತಿಗೆ ಮಠಕ್ಕೆ ಹೋಗಿ ಎಂದ ಹೈಕೋರ್ಟ್!

ಸೆಪ್ಟೆಂಬರ್ 22, 2024 - 20:02
 0  10
ಡಿವೋರ್ಸ್​ ಕೇಳಿದ ದಂಪತಿಗೆ ಮಠಕ್ಕೆ ಹೋಗಿ ಎಂದ ಹೈಕೋರ್ಟ್!

ಧಾರವಾಡ:- ಡಿವೋರ್ಸ್​ಗಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚನೆ ಕೊಟ್ಟಿದ್ದಾರೆ. ಡಿವೋರ್ಸ್​ ಕೇಳಿದ್ದವರಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚಿಸಿದ್ದು ಹಲವರಲ್ಲಿ ಕುತೂಹಲ ಮೂಡಿಸಿದೆ. 

4 ವರ್ಷದ ಹಿಂದೆ ಗದಗ ಜಿಲ್ಲೆಯ ದಂಪತಿ ಡಿವೋರ್ಸ್​ ಬೇಕು ಅಂತ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 17ರಂದು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ.ಶ್ರೀ ಕೃಷ್ಣ ದೀಕ್ಷಿತ್ ಅವರು, ದಂಪತಿಗೆ ಬುದ್ಧಿವಾದ ಹೇಳಿದ್ದಾರೆ. ಗಂಡ-ಹೆಂಡತಿ ಜಗಳ ಕಾಮನ್. ಸಣ್ಣ ವಿಚಾರಕ್ಕೆ ಮುನಿಸಿಕೊಂಡು ದೂರ ಆಗಿ ಜೀವನ ಹಾಳ್ ಮಾಡಿಕೊಳ್ಳಬೇಡಿ. 

ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಿ. ಏನಾದರೂ ಮಾನಸಿಕವಾಗಿ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿಗೆ ಹೋಗಿ ಅಂತ ತಿಳಿ ಹೇಳಿದ್ದಾರೆ.

ನಾವು ಮನೋವೈದ್ಯರ ಬಳಿ ಹೋಗಿದ್ವಿ. ಆದರೂ ಸಮಸ್ಯೆ ಬಗೆಹರಿದಿಲ್ಲ ಅಂತ ಕೋರ್ಟ್​ಗೆ ದಂಪತಿ ಹೇಳಿದ್ದಾರೆ. ಆಗ ನ್ಯಾಯಮೂರ್ತಿಗಳು ಯಾವುದಾದ್ರೂ ಮಠಾಧೀಶರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಜಡ್ಜ್ ಮಾತಿಗೆ ಒಪ್ಪಿದ ಗಂಡ ಗದಗ್​ನ ತೋಂಟದಾರ್ಯ ಮಠದ ಸ್ವಾಮೀಜಿ ಹತ್ರ ಹೋಗ್ತೀವಿ ಅಂತ ಹೇಳಿದ್ದಾನೆ. 

ಕೋರ್ಟ್​ನಲ್ಲಿ ಗಂಡನ ಮಾತಿಗೆ ಒಪ್ಪದ ಹೆಂಡತಿ ತೋಂಟದಾರ್ಯ ಮಠ ಬೇಡ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗ್ತೀವಿ ಅಂದಿದ್ದಾಳೆ. ಈ ವೇಳೆ ನ್ಯಾಯಮೂರ್ತಿಗಳು ಒಳ್ಳೆಯದೇ ಆಯ್ತು. ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಂತೆ ಇದ್ದಾರೆ. ಅವರ ಭಾಷಣ ಕೇಳಿದ್ದೇನೆ. ಅವರ ಬಳಿಯೇ ಹೋಗಿ ಅಂತ ಸಲಹೆ ಕೊಟ್ಟಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow