ನಿಖಿಲ್ ಕುಮಾರಸ್ವಾಮಿಗೆ ಶಾಕ್! ಯೋಗೇಶ್ವರ್‌ಗೆ 18,898 ಮತಗಳ ಮುನ್ನಡೆ!

ನವೆಂಬರ್ 23, 2024 - 11:05
 0  12
ನಿಖಿಲ್ ಕುಮಾರಸ್ವಾಮಿಗೆ ಶಾಕ್! ಯೋಗೇಶ್ವರ್‌ಗೆ 18,898 ಮತಗಳ ಮುನ್ನಡೆ!

ಈಗಾಗಲೇ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಉಪಚುನಾವಣೆಯ ಮತದಾನ ಮುಕ್ತಾಯವಾಗಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ ಈ ಮೂರು ಕ್ಷೇತ್ರಗಳಲ್ಲಿ 2 ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಹಾಗೂ ಒಂದರಲ್ಲಿ ಕಾಂಗ್ರೆಸ್ ಗೆಲುವು ಕಾಣಲಿದೆ. ಆದ್ರೆ ಎಲ್ಲಾ ಬದಲಾಗವಣೆಯಾಗಿದೆ.

ಹೌದು ರಾಜ್ಯದಲ್ಲಿ ಮಾಜಿ ಸಿಎಂ ಪುತ್ರರರಿಗೆ ಇದು ಬಿಗ್‌‌ ಶಾಕ್ ಎನ್ನಬಹುದು. ಬಸವರಾಜ್‌ ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿ ಹಿನ್ನಡೆ ಅನುಭವಿಸಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಕೂಡ ಭಾರೀ ಹಿನ್ನಡೆ ಅನುಭವಿಸಿದ್ದಾರೆ.

ಚನ್ನಪಟ್ಟಣದಲ್ಲಿ ಟ್ರೆಂಡ್‌ ಸಂಪೂರ್ಣ ಬದಲಾಗಿದೆ. 12ನೇ ಸುತ್ತು ಮುಗಿದಿದೆ. ಸಿಪಿ ಯೋಗೇಶ್ವರ್‌ 23,210 ಮತಗಳಿಂದ ಮುನ್ನಡೆ ಪಡೆದುಕೊಂಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿಗೆ ಬಿಗ್‌ ಶಾಕ್‌ ಎದುರಾಗಿದೆ. ಇನ್ನೂ 9 ಸುತ್ತಿನ ಮತ ಎಣಿಕೆ ಬಾಕಿಯಿದೆ. ಟೌನ್‌ ಮತದಾರರು ಯೋಗೇಶ್ವರ್‌ ಕೈ ಹಿಡಿದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow